ಚಿಕ್ಕಮಗಳೂರು: ಕಾಡಾನೆ ತಿವಿದು ಅರಣ್ಯ ರಕ್ಷಕ ಸಾವು

ಆನೆಯನ್ನು ಕಾಡಿಗೆ ಅಟ್ಟಲು ತೆರಳಿದಾಗ ಕಾಡಾನೆ ತಿವಿದು ಅರಣ್ಯ ರಕ್ಷಕನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಆಲ್ದೂರು ಸಮೀಪ ಮಡೆನೆರಳು ಬಳಿ ಶುಕ್ರವಾರ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಆನೆಯನ್ನು ಕಾಡಿಗೆ ಅಟ್ಟಲು ತೆರಳಿದಾಗ ಕಾಡಾನೆ ತಿವಿದು ಅರಣ್ಯ ರಕ್ಷಕನೋರ್ವ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಆಲ್ದೂರು ಸಮೀಪ ಮಡೆನೆರಳು ಬಳಿ ಶುಕ್ರವಾರ ನಡೆದಿದೆ.

ಮೃತಪಟ್ಟ ಅರಣ್ಯ ರಕ್ಷಕ ಪುಟ್ಟರಾಜು(38) ಎಂದು ಗುರುತಿಸಲಾಗಿದ್ದು, ಇಂದು ಬೆಳಗ್ಗೆ 11.30ರ ಸುಮಾರಿಗೆ ಈ ಅವಘಡ ಸಂಭವಿಸಿದೆ.

ಆನೆ ತಿವಿದ ತೀವ್ರತೆಗೆ ಗಾಯಗೊಂಡಿದ್ದ ಪುಟ್ಟರಾಜು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಮಾರ್ಗಮಧ್ಯೆದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುದ್ದಣ್ಣ ಪ್ರತಿಕ್ರಿಯಿಸಿ, ಆನೆಯನ್ನು ಕಾಡಿಗೆ ಅಟ್ಟಲು ಅರಣ್ಯ ಸಿಬ್ಬಂದಿ ತಂಡ ತೆರಳಿದ್ದು, ಈ ಕಾರ್ಯದಲ್ಲಿ ಪುಟ್ಟರಾಜು ಕೂಡ ಇದ್ದರು. ಕಾರ್ಯಾಚಣೆ ವೇಳೆ ಆನೆ ಅವರ ಮೇಲೆ ದಾಳಿ ಮಾಡಿದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com