ವಿಜಯಪುರ: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದ ತಾಯಿ 

ಕೊರೋನಾ ಮಹಾಮಾರಿ ಹಲವರ ಜೀವ ತೆಗೆದುಕೊಂಡಿದೆ. ಗಂಡ-ಹೆಂಡತಿ, ಮಕ್ಕಳು, ತಾಯಿ-ತಂದೆ, ಮಕ್ಕಳು ಹಲವು ಕಡೆಗಳಲ್ಲಿ ಒಟ್ಟಿಗೆ ಮೃತಪಟ್ಟಿರುವ ಘಟನೆ ಸಾಕಷ್ಟು ನಡೆದಿದೆ.
ತಾಯಿ ಲಲಿತಾಬಾಯಿ, ಪುತ್ರ ದಶರಥ
ತಾಯಿ ಲಲಿತಾಬಾಯಿ, ಪುತ್ರ ದಶರಥ

ವಿಜಯಪುರ: ಕೊರೋನಾ ಮಹಾಮಾರಿ ಹಲವರ ಜೀವ ತೆಗೆದುಕೊಂಡಿದೆ. ಗಂಡ-ಹೆಂಡತಿ, ಮಕ್ಕಳು, ತಾಯಿ-ತಂದೆ, ಮಕ್ಕಳು ಹಲವು ಕಡೆಗಳಲ್ಲಿ ಒಟ್ಟಿಗೆ ಮೃತಪಟ್ಟಿರುವ ಘಟನೆ ಸಾಕಷ್ಟು ನಡೆದಿದೆ.

ವಿಜಯಪುರದಲ್ಲಿ ಕೂಡ ನಿನ್ನೆ ಇಂಥಹದ್ದೇ ಘಟನೆಯಾಗಿದೆ. ಶಿರಸಿಯಲ್ಲಿ ಹೈಸ್ಕೂಲ್ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ 54 ವರ್ಷದ ಪುತ್ರ ಕೋವಿಡ್ ಸೋಂಕಿನಿಂದ ಮೃತಪಟ್ಟ ಸುದ್ದಿ ಕೇಳಿದ 80 ವರ್ಷದ ವೃದ್ಧೆ ತಾಯಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು 80 ವರ್ಷದ ವೃದ್ಧೆ ಎಂ ಲಲಿತಾಬಾಯಿ ಮತ್ತು 54 ವರ್ಷದ ಅವರ ಪುತ್ರ ಎಂ.ದಶರಥ ಎಂದು ಗುರುತಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com