ವಿಜಯನಗರ: ಮೃತ ಅಂಗನವಾಡಿ ಕಾರ್ಯಕರ್ತೆ ಪುತ್ರಿಗೆ 30 ಲಕ್ಷ ರೂ. ಪರಿಹಾರ ವಿತರಣೆ

ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಅಂಗನವಾಡಿ ಕಾರ್ಯಕರ್ತೆಯ ವಾರಸುದಾರರಿಗೆ 30 ಲಕ್ಷ ರೂ ಪರಿಹಾರ ಚೆಕ್ ಅನ್ನು ಬುಧವಾರ ವಿತರಿಸಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯನಗರ: ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಅಂಗನವಾಡಿ ಕಾರ್ಯಕರ್ತೆಯ ವಾರಸುದಾರರಿಗೆ 30 ಲಕ್ಷ ರೂ ಪರಿಹಾರ ಚೆಕ್ ಅನ್ನು ಬುಧವಾರ ವಿತರಿಸಲಾಯಿತು.

ಹೊಸಪೇಟೆ ನಗರ ವ್ಯಾಪ್ತಿಯ 15ನೇ ವಾರ್ಡ-2ನೇ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆ ಶಾರದಾ ಅವರು ಕೋವಿಡ್-19ರ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೋವಿಡ್ ನಿಂದ ಕಳೆದ ವರ್ಷ ಆ.19ರಂದು ಮರಣಹೊಂದಿದ್ದರು. ಹೀಗಾಗಿ ಅವರ ವಾರಸುದಾರರಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 30ಲಕ್ಷ ರೂ.ಗಳ ಮರಣ ಪರಿಹಾರವನ್ನು ಬುಧವಾರ ವಿತರಿಸಲಾಯಿತು.

ಹುಡಾ ಅಧ್ಯಕ್ಷ ಅಶೋಕ್ ಜೀರೆ ಅವರು ಶಾರದಾ ಅವರ ಪುತ್ರಿ ಉಷಾ ಅವರಿಗೆ ಮರಣ ಪರಿಹಾರ ಮೊತ್ತವನ್ನು ವಿತರಿಸಿದರು. ಈ ಸಂದರ್ಭದಲ್ಲಿ ಹೊಸಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿಂಧು ಎಲಿಗಾರ್, ಮುಖಂಡರಾದ ಧರ್ಮೇಂದ್ರ ಸಿಂಗ್, ಸಂದೀಪ್‍ಸಿಂಗ್ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com