ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ: ಕೃಷಿ ಸಚಿವ ಬಿ.ಸಿ.ಪಾಟೀಲ್
ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.
Published: 14th November 2021 12:16 PM | Last Updated: 14th November 2021 12:16 PM | A+A A-

ಹಿರೇಕೆರೂರಿನಲ್ಲಿ ಸಚಿವ ಬಿಸಿ.ಪಾಟೀಲ್ ಹಾಗೂ ನಟ ದರ್ಶನ್
ಬೆಂಗಳೂರು: ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.
ರೈತರಿಗೊಂದು ದಿನ ಕಾರ್ಯಕ್ರಮದ ಸಂದರ್ಭ ಸಚಿವ ಬಿ.ಸಿ.ಪಾಟೀಲ್ ಅವರು ರೈತರೊಂದಿಗೆ ಕಾಲ ಕಳೆಯುತ್ತಿದ್ದು, ಇದೇ ವೇಳೆ ತಮ್ಮ ಜನ್ಮದಿನವನ್ನೂ ಆಚರಿಸಿಕೊಂಡಿದ್ದಾರೆ.
ರೈತರೊಂದಿಗೊಂದು ದಿನ' ಕಾರ್ಯಕ್ರಮದ ನಿಮಿತ್ತ ಹಿರೇಕೆರೂರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಅವರನ್ನು ಕ್ಷೇತ್ರದ ಜನರು ಸಂತಸದಿಂದ ಸ್ವಾಗತಿಸಿದರು.
ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಜೋಳ ಮತ್ತು ರಾಗಿ ಬೀಸುವ ಮೂಲಕ ವಿಶೇಷವಾಗಿ ನಮ್ಮನ್ನು ಸ್ವಾಗತಿಸಿದ ಮಹಿಳೆಯರು. #ರೈತರೊಂದಿಗೊಂದುದಿನ | #OneDayWithFarmers| #Haveri | #Hirekerur | #Rattihalli pic.twitter.com/i6CAhRoKFi
— Kourava B.C.Patil (@bcpatilkourava) November 14, 2021
ಬಳಿಕ ಹಿರೆಕೆರೂರಿನ ಸ್ವಗೃಹದಲ್ಲಿ, ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ಬಿಸಿ ಪಾಟೀಲ್ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ಇಂದು ಹಿರೆಕೆರೂರಿನ ನನ್ನ ಸ್ವಗೃಹದಲ್ಲಿ, ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ನನ್ನ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡ ಕ್ಷಣಗಳು.#Birthday | #Haveri | #Hirekerur pic.twitter.com/gZcMC5onCs
— Kourava B.C.Patil (@bcpatilkourava) November 14, 2021
ನಂತರ ರೈತರನ್ನು ಕೊಂಡಾಡಿದ ಅವರು, ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಹೇಳಿದರು.