'ಅವ್ವ'ನ ನೆನಪಿನಲ್ಲಿ ಪುಸ್ತಕ ಹೊರ ತರಲಿದ್ದಾರೆ ಸಿಎಂ ಬೊಮ್ಮಾಯಿ:

‘ಅವ್ವ’ (ತಾಯಿ) ಎಂಬ ಕನ್ನಡ ಕಥಾ ಸಂಕಲನವನ್ನು ಹೊರತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ‘ಅವ್ವ’ (ತಾಯಿ) ಎಂಬ ಕನ್ನಡ ಕಥಾ ಸಂಕಲನವನ್ನು ಹೊರತರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡದ ಹೆಸರಾಂತ ಲೇಖಕರ 66 ಕನ್ನಡ ಪುಸ್ತಕಗಳನ್ನು ಶನಿವಾರ ಬಿಡುಗಡೆಗೊಳಿಸಿದ ಅವರು ಈ ಘೋಷಣೆ ಮಾಡಿದರು.

ದಿವಂಗತ ತಾಯಿಯ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದ ಬೊಮ್ಮಾಯಿ ಅವರು, 'ಅವ್ವ' ತಾಯಂದಿರಿಗೆ ಗೌರವವಾಗಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯವನ್ನು ಬೆಳೆಸಲು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಜನತೆಗೆ ಮನವಿ ಮಾಡಿದರು.

ಬರವಣಿಗೆಯಲ್ಲಿ ತೊಡಗಿರುವ ಕರ್ನಾಟಕದ ಕೆಲವೇ ಕೆಲವು ಮುಖ್ಯಮಂತ್ರಿಗಳಲ್ಲಿ ಬೊಮ್ಮಾಯಿ ಕೂಡ ಒಬ್ಬರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್.ಆರ್.ಬೊಮ್ಮಾಯಿ ಅವರ ತಾಯಿ ಮತ್ತು ಪತ್ನಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಅವರು 2002 ರಲ್ಲಿ ನಿಧನರಾದರು.

ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಎಂ.ವೀರಪ್ಪ ಮೊಯ್ಲಿ ಅವರು ಪ್ರಸಿದ್ಧ ಬರಹಗಾರರೂ ಆಗಿದ್ದು, 'ತೆಂಬರೆ', ಕೊಟ್ಟ', 'ಸುಳಿಗಲಿ', 'ಸಾಗರದೀಪ', 'ಪಾರಿಜಾತ' ಮತ್ತು 'ಮಿಲನ' ಸೇರಿದಂತೆ ಹಲವು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ‘ಶ್ರೀ ರಾಮಾಯಣ ಮಹಾನ್ವೇಷಣಂ’ ಐದು ಸಂಪುಟಗಳಲ್ಲಿ ಪ್ರಕಟವಾದ ಕವನಗಳ ಸಂಗ್ರಹವಾಗಿದೆ. ಮೊಯ್ಲಿ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೂ ಭಾಜನರಾಗಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com