ಚಾಲಕನೊಂದಿಗೆ ಉಗಾಂಡಾ ಪ್ರಜೆಗಳ ಕಿರಿಕ್: ಓರ್ವನ ಬಂಧನ 

ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಚಪ್ಪಲಿಯಿಂದ ಥಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಉಗಾಂಡ ಪ್ರಜೆಗಳ ಪುಂಡಾಟ ಮುಂದುವರೆದಿದ್ದು, ರಾಜಾಜಿನಗರದ ಪ್ರತಿಷ್ಠಿತ ಹೋಟೆಲ್ ಆವರಣದಲ್ಲಿ ಕ್ಯಾಬ್ ಚಾಲಕನಿಗೆ ಉಗಾಂಡ ಪ್ರಜೆಗಳು ಚಪ್ಪಲಿಯಿಂದ ಥಳಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.

ಉಗಾಂಡ ಪ್ರಜೆಗಳು ಕಾಲೇಜು ಕಾರ್ಯಕ್ರಮದ ನಿಮಿತ್ತ ರಾಜಾಜಿನಗರ ಪ್ರತಿಷ್ಠಿತ ಹೋಟೆಲ್ ವೊಂದಕ್ಕೆ ಆಗಮಿಸಿದ್ದರು. ರಾತ್ರಿ 10 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆ ಓಲಾ ಕ್ಯಾಬ್ ಬುಕ್ ಮಾಡಿದ್ದರು.

ಅಂತೆಯೇ ಕ್ಯಾಬ್ ಚಾಲಕ ಸಾಗರ್ ಸ್ಥಳಕ್ಕೆ ಬಂದಾಗ, 5 ಜನ ಕಾರು ಹತ್ತಲು ಮುಂದಾಗಿದ್ದರು. ನಂತರ ಕ್ಯಾಬ್ ಚಾಲಕ, ಐವರನ್ನು ಕರೆದುಕೊಂಡು ಹೋಗಲು ಬರುವುದಿಲ್ಲ. ಕೇವಲ 4 ಜನ ಮಾತ್ರ ಬನ್ನಿ ಎಂದಿದ್ದರು. ಆದರೆ, ಇದಕ್ಕೆ ಸಮ್ಮತಿಸದ ಉಗಾಂಡಾ ಪ್ರಜೆಗಳು, ಟ್ರಿಪ್ ಕ್ಯಾನ್ಸಲ್ ಮಾಡಿದ್ದರು. ಈ ವೇಳೆ ಕ್ಯಾಬ್ ಚಾಲಕ ನೂರು ರೂಪಾಯಿ ಬಿಲ್ ಬಂದಿದೆ ಕೊಡಿ ಎಂದು ಕೇಳಿದ್ದರು. ಇದೇ ವಿಷಯಕ್ಕೆ ವಿದೇಶಿ ಪ್ರಜೆಗಳು ರಂಪಾಟ ಮಾಡಿ, ಕ್ಯಾಬ್ ಚಾಲಕನನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com