ಸಿಎಂ ಬೊಮ್ಮಾಯಿ ನಿವಾಸದ ಬಳಿ ಆ್ಯಂಬುಲೆನ್ಸ್-ನಂದಿನಿ ಕಂಟೈನರ್ ನಡುವೆ ಭೀಕರ ಅಪಘಾತ

ಕಂಟೈನರ್ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಕೂಗಳತೆ ದೂರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಂಟೈನರ್ ಹಾಗೂ ಆ್ಯಂಬುಲೆನ್ಸ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಕೂಗಳತೆ ದೂರದಲ್ಲಿ ನಡೆದಿದೆ.

ಭಾನುವಾರ ನಸುಕಿನ ಜಾವ 4 ಗಂಟೆಗೆ ಆರ್.ಸಿ.ರೋಡ್ ನ ಹೋಟಲ್ ತಾಜ್ ಎಂಡ್ ಮುಂದೆ ಈ ಅಪಘಾತ ಸಂಭವಿಸಿದೆ.

ಆರ್ ಸಿ ರೋಡ್​ನಲ್ಲಿ ಒಂದು ಭಾಗದ ರಸ್ತೆಗೆ ಟಾರ್ ಹಾಕುವ ಕಾರ್ಯ ನಡೆಯುತ್ತಿದೆ. ಹೀಗಾಗಿ ಮತ್ತೊಂದು ಭಾಗದ ರಸ್ತೆಯನ್ನು ದ್ವಿಮುಖ ಮಾರ್ಗವಾಗಿ ಮಾಡಿದ್ದಾರೆ. ಒನ್ ವೇ ಎಂದು ಎಂದಿನಂತೆ ಸಾಗಿದ ಕಂಟೈನರ್ ಚಾಲಕ, ಮುಂದೆ ಆ್ಯಂಬುಲೆನ್ಸ್ ಟಿಟಿ ಬಂದಿರುವುದನ್ನು ನೋಡಿ ಆ್ಯಂಬುಲೆನ್ಸ್ ಗೆ ಡಿಕ್ಕಿ ಹೊಡೆಯುತ್ತದೆ ಎಂದು ಚಾಲಕ ಬಲಕ್ಕೆ ತಿರುಗಿಸಿದ್ದು, ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಏರಿ ವಾಹನ ಪಲ್ಟಿಯಾಗಿದೆ. ಸದ್ಯ ಕಂಟೈನರ್ ಲಾರಿಯನ್ನು ಕ್ರೇನ್ ಮೂಲಕ ಎತ್ತಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com