ಬೆಂಗಳೂರು: ಚುಂಚಿ ಫಾಲ್ಸ್ ನಲ್ಲಿ ಕೊಚ್ಚಿ ಹೋಗಿ ಖಾಸಗಿ ಕಂಪನಿ ಉದ್ಯೋಗಿ ಸಾವು

ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನ ಚುಂಚಿ ಜಲಪಾತದ ಬಂಡೆ ಮೇಲಿಂದ ಜಾರಿ ಬಿದ್ದು 26 ವರ್ಷದ ಖಾಸಗಿ ಕಂಪನಿ ಎಚ್ .ಆರ್ ಒಬ್ಬರು ಮೃತಪಟ್ಟಿದ್ದಾರೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ಸಮೀಪದ ಸಾತನೂರಿನ ಚುಂಚಿ ಜಲಪಾತದ ಬಂಡೆ ಮೇಲಿಂದ ಜಾರಿ ಬಿದ್ದು 26 ವರ್ಷದ ಖಾಸಗಿ ಕಂಪನಿ ಎಚ್ .ಆರ್ ಒಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಶಂಕರ ಮಠದ ನಿವಾಸಿ ಪ್ರವೀಣ್ ಚಂದ್ರ  ಮೃತ ವ್ಯಕ್ತಿ.

ಭಾನುವಾರ ತನ್ನ ಸ್ನೇಹಿತರ ಜೊತೆ ಚುಂಚಿಫಾಲ್ಸ್ ಗೆ ಬಂದಿದ್ದ ವೇಳೆ ಈ ಘಟನೆ ನಡೆದಿದ್ದು, ಅಪಾಯದ ಸ್ಥಳದಲ್ಲಿ ಫೋಟೋ  ಕ್ಲಿಕ್ಕಿಸಿಕೊಳ್ಳಲು ಹೋಗಿ ಈ ಸಾವು ಸಂಭವಿಸಿದೆ. ನಿಷೇಧಿತ ಸ್ಥಳಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಈ ದುರಂತ ಸಂಭವಿಸಿದೆ,

ಸೋಮವಾರ ಶೋಧ ಕಾರ್ಯ ನಡೆಸಲಾಯಿತು, ಸಂಜೆ ವೇಳೆಗೆ ಮೃತದೇಹ ಪತ್ತೆಯಾಗಿದೆ.  ಆದರೆ ದೇಹವು ನೀರಿನ ಆಳದಲ್ಲಿ ಸಿಲುಕಿಕೊಂಡಿತ್ತು, ಜೊತೆಗೆ ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತ.  ಮಂಗಳವಾರ ಬೆಳಿಗ್ಗೆ ಪುನರಾರಂಭಿಸಲಾಯಿತು. ಮುಳುಗು ತಜ್ಞರ ನೆರವಿನಿಂದ ಮೃತದೇಹವನ್ನು ಹೊರ ತೆಗೆಯಲಾಯಿತು' ಎಂದು ಪ್ರಕರಣ ದಾಖಲಿಸಿಕೊಂಡಿರುವ ಸಾತನೂರು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com