ಬೆಂಗಳೂರು: ತಂದೆ ಜೊತೆ ಜಗಳ ಮಾಡಬೇಡ ಎಂದು ಬುದ್ದಿ ಹೇಳಿದ್ದೇ ತಪ್ಪಾಯ್ತು; ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ

ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ. ಅಜಿಮುಲ್ಲಾ ಖಾನ್(43)ಮೃತ ದುರ್ದೈವಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಹೆಗ್ಗನಹಳ್ಳಿಯಲ್ಲಿ ನಡೆದಿದೆ. ಅಜಿಮುಲ್ಲಾ ಖಾನ್(43)ಮೃತ ದುರ್ದೈವಿ.

ಪಕ್ಕದ ಮನೆಯವರೊಂದಿಗೆ ಗಲಾಟೆ ನಡೆದಿದ್ದು ಆರೋಪಿ ಅನೀಫ್ ಚಾಕುವಿ‌ನಿಂದ ಇರಿದು ಪರಾರಿಯಾಗಿದ್ದಾನೆ‌. ಗಂಭೀರವಾಗಿದ್ದಅಜಿಮುಲ್ಲಾ ಖಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಮೃತಪಟ್ಟಿದ್ದಾರೆ.

ಆರೋಪಿ ಅನೀಫ್ ತನ್ನ ತಂದೆಯೊಂದಿಗೆ ಜಗಳವಾಡುತ್ತಿದ್ದ, ಈ ವೇಳೆ ಅಜಿಮುಲ್ಲಾ ಖಾನ್ ಜಗಳವಾಡದಂತೆ ಅನೀಫ್ ಗೆ ಸಲಹೆ ನೀಡಿದ್ದಾರೆ. ಇದರಿಂದ ಕೋಪಗೊಂಡ ಅನೀಫ್ ಚಾಕುವಿನಿಂದ ಅಜಿಮುಲ್ಲಾ ಎದೆಗೆ ಇರಿದಿದ್ದಾನೆ. ರಾಜಗೋಪಾಲ್ ನಗರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com