social_icon

ಮತ್ತೆ ಪ್ರತಿಭಟನೆಗೆ KSRTC ನೌಕರರ ನಿರ್ಧಾರ?

ಈ ಹಿಂದೆ ಪ್ರತಿಭಟನೆ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ KSRTC ನೌಕರರ ಇದೀಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

Published: 12th December 2022 09:57 PM  |   Last Updated: 13th December 2022 01:55 PM   |  A+A-


KSRTC employees to strike again

ಸಂಗ್ರಹ ಚಿತ್ರ

Posted By : srinivasamurthy
Source : Online Desk

ಬೆಂಗಳೂರು: ಈ ಹಿಂದೆ ಪ್ರತಿಭಟನೆ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದ KSRTC ನೌಕರರ ಇದೀಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಕರ್ನಾಟಕ ಸಾರಿಗೆ ನೌಕರರು (KSRTC And BMTC Employees Strike) ಮತ್ತೆ ಪ್ರತಿಭಟನೆ (Protest) ನಡೆಸಲು ತೀರ್ಮಾನಿಸಿದ್ದು, ಚಳಿಗಾಲದ ಅಧಿವೇಶನ (Winter Session) ಸಂದರ್ಭದಲ್ಲಿ ಬೇಡಿಕೆ ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ಇಲಾಖೆಯ ಎಲ್ಲಾ ವಿಭಾಗದ ಸಿಬ್ಬಂದಿ ಪ್ರತಿಭಟನೆ ನಡೆಸುವ ಕುರಿತು ಚಿಂತನೆ ನಡೆಸಿದ್ದಾರೆ. 

ಪ್ರತಿಭಟನೆ ಒಂದು ಅಥವಾ ಎರಡು ದಿನಕ್ಕೆ ಸೀಮಿತವಾದರೆ ಸಾರ್ವಜನಿಕರಿಗೆ ಬದಲಿ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಕಳೆದ ಬಾರಿಯಂತೆ ವಾರಗಟ್ಟಲೇ ಬಸ್ ಸಂಚಾರ (Bus Bandh) ಸ್ಥಗಿತಗೊಂಡರೆ ಕೆಳ ಹಾಗೂ ಮಧ್ಯಮ ವರ್ಗ ಜನತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೊನೆ ಬಾರಿ ಪ್ರತಿಭಟನೆ ನಡೆಸಿದಾಗ ಸರ್ಕಾರ (Karnataka Government) ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು. ಆದರೆ ಈವರೆಗೂ ಆ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ಮತ್ತೆ ನೌಕರರು ರಸ್ತೆಗೆ ಇಳಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಕೆಎಸ್ಆರ್ ಟಿಸಿ ಬಸ್ ಗಳ ಮೇಲೆ 'ಜೈ ಮಹಾರಾಷ್ಟ್ರ' ಎಂದು ಬರೆದ ಶಿವಸೇನಾ ಕಾರ್ಯಕರ್ತರು

ಮೂಲಗಳ ಪ್ರಕಾರ ದೊಡ್ಡ ಮಟ್ಟದಲ್ಲಿ ನೌಕರರು ಪ್ರತಿಭಟನೆಗೆ ಸಿದ್ಧತೆ ನಡೆಸಲು ಮುಂದಾಗಿದ್ದು, ವಿವಿಧ ಬೇಡಿಕೆಗಳೊಂದಿಗೆ ರಾಜ್ಯವ್ಯಾಪಿ ಮುಷ್ಕರ ನಡೆಸಲು ಸಾರಿಗೆ ಸಿಬ್ಬಂದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಮುಷ್ಕರ ನಡೆಸುವ ದಿನಾಂಕ ಇನ್ನು ಅಂತಿಮಗೊಂಡಿಲ್ಲ. ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ನಾಲ್ಕು ನಿಗಮದ ಸಾವಿರಾರು ನೌಕರರು ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಸಾರಿಗೆ ನೌಕರರ ಸಮನ್ವಯ ಸಮಿತಿ ಸದಸ್ಯರು ಪ್ರತಿಭಟನೆ ಸಂಬಂಧ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಇದನ್ನೂ ಓದಿ: ಕೆಎಸ್ಆರ್ ಟಿಸಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಸರ್ಕಾರಕ್ಕೆ ಕುಮಾರಸ್ವಾಮಿ ಪತ್ರ

ಬಸ್ ಸಂಚಾರ ಸ್ಥಗಿತ ಸಾಧ್ಯತೆ
ಆದ್ರೆ ಕಳೆದ ಬಾರಿಯಂತೆ ವಾರಗಟ್ಟಲೇ ಬಸ್ ಸಂಚಾರ (Bus Bandh) ಸ್ಥಗಿತಗೊಂಡದ್ರೆ ಕೆಳ ಹಾಗೂ ಮಧ್ಯಮ ವರ್ಗ ಜನತೆ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಕೊನೆ ಬಾರಿ ಪ್ರತಿಭಟನೆ ನಡೆಸಿದಾಗ ಸರ್ಕಾರ (Karnataka Government) ಬೇಡಿಕೆ ಈಡೇರಿಸುವ ಭರವಸೆಯನ್ನು ನೀಡಿತ್ತು. ಬೇಡಿಕೆ ಈಡೇರದ ಹಿನ್ನೆಲೆ ಮತ್ತೆ ರಸ್ತೆಗೆ ಇಳಿಯಲು ಮುಂದಾಗಿದ್ದಾರೆ.

ಒಟ್ಟು ಎಂಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸಾರಿಗೆ ನೌಕರರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಕಳೆದ ಬಾರಿ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ಸರ್ಕಾರ ಖಾಸಗಿ ಬಸ್​ಗಳನ್ನು ಓಡಿಸಿತ್ತು. ಹೀಗೆ ಈ ಪ್ರತಿಭಟನೆ 15 ದಿನಗಳವರೆಗೂ ನಡೆದಿತ್ತು.

ಈಡೇರದ ನೌಕರರ ಬೇಡಿಕೆಗಳೇನು?
1.6ನೇ ವೇತನ ಆಯೋಗದ ಮಾದರಿಯಲ್ಲಿ ಶಿಫಾರಸು ಮಾಡಿ ಜಾರಿಗೊಳಿಸದಿರುವುದು
2.ವೈದ್ಯಕೀಯ ಸೌಲಭ್ಯಗಳನ್ನು ನೀಡದಿರುವುದು
3.ವಜಾಗೊಂಡ ನೌಕರರ ಮರು ನೇಮಕವಾಗಿಲ್ಲ
4.ನಿವೃತ್ತಿ ಆಗಿ 30 (ಎರೂಡವರೆ ವರ್ಷ) ತಿಂಗಳು ಕಳೆದರೂ ಗ್ರಾಚ್ಯೂಟಿ ಹಣ ನೀಡಿಲ್ಲ
5.ಕೊರೊನಾದಿಂದ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಪರಿಹಾರ ನೀಡಿಲ್ಲ.
6.ಖಾಲಿ ಹುದ್ದೆಗಳ ನೇಮಕಾತಿ ಭರ್ತಿ ಮಾಡಿಲ್ಲ
7.ಕೆಎಸ್ಆರ್​ಟಿಸಿ ಖಾಸಗೀಕರಣಕ್ಕೆ ಮುಂದಾಗಿರುವುದನ್ನು ವಿರೋಧಿಸಿ
8.ಸಾರಿಗೆ ನೌಕರರ ಹಾಗು ಕುಟುಂಬ ಸದಸ್ಯರ ಮೇಲೆ ಹಾಕಿರುವ ಪೊಲೀಸ್ ಪ್ರಕರಣಗಳ ಹಿಂಪಡೆದಿಲ್ಲ


Stay up to date on all the latest ರಾಜ್ಯ news
Poll
Railways Minister Ashwini Vaishnaw waves at a goods train as train services resume

ಒಡಿಶಾದಲ್ಲಿ ಭೀಕರ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕೇ?


Result
ಹೌದು
ಬೇಡ

Comments(4)

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

  • Raghavendra Prabhu

    ಇಂತಹ ಜನ ವಿರೋಧಿ ನೌಕರರು, ಸಾರ್ವಜನಿಕ ಸೌಕರ್ಯದ ಮೂಲ ಉದ್ದೇಶಕ್ಕಿಂತ ತಮ್ಮ ಬೇಡಿಕೆಗಳೇ ಹೆಚ್ಚು ಪ್ರಮುಖ ಕೆಲಸ ನಿಲ್ಲಿಸಿ ಸಮಾನ್ಯ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸುಲಿಗೆ ಮಾಡುವ ಡಕಾಯಿತರಂತೆ. ಇಂತಹಾ ಸಮಾಜಘಾತುಕರನ್ನು ಮನೆಗೆ ಕಳಿಸಿ. ಸಾರಿಗೆ ಖಾಸಗಿಯವರೇ ನಡೆಸಲಿ. ಕೆಲವು ರೂಪಾಯಿ ಹೆಚ್ಚು ಕೇಳಿಯಾರು, ಅಗತ್ಯವಾದ ಸೌಕರ್ಯ ಬೇಕೆಂದಾಗ ಸಿಗದಿದ್ದರೆ ಬೆಲೆ ಕಡಿಮೆಯಿದ್ದುದರ ಪ್ರಯೋಜನವೇನೂ ಇಲ್ಲ. ಸೌಕರ್ಯ ಸಿಗುವಂತಿದ್ದರೆ ಹಣ ಕೊಡಲು ಬೇಜಾರಿಲ್ಲ.
    5 months ago reply
    • Sunil Bandhan Bank

      ನೀವು ಏನು ಕೆಲಸ ಮಾಡತಿರಿ ಸ್ವಲ್ಪ ಹೇಳಿ ನೀವು ನಿಮ್ಮ ಹಕ್ಕಿಗಾಗಿ ಹೇಗೆ ಹೋರಡತಿರಿ ಹಾಗೆ ಎಲ್ಲರಿಗೂ ಅವರ ಹಕ್ಕಿಗಾಗಿ ಹೋರಾಡುವ ಸ್ವಾತಂತ್ಯ ಇದೆ
      5 months ago reply
    • Raj

      ಅವರ ಹಕ್ಕು ಅವರು ಕೇಳುತಿರುವರು ನಿಮ್ಮ ಗಂಟೇನು ಹೋಗುತ್ತೆ ಅವರಿಗೆ ಬರಬೇಕದ್ದನ್ನು ಕ್ವಾಳುವುದು ತಪ್ಪ 6 ವರ್ಷ ಆಯಿತು ವೇತನ ಹೆಚ್ಚಿಸಿಲ್ಲ ನೀವು ನಿಮ್ಮ್ ಸಂಬಳ ಹೆಚ್ಚಿಸಿಲ್ಲ ಅಂದ್ರೆ ಸುಮ್ಮ್ ನೇ ಇರ್ತಿರ
      5 months ago reply
      • Sunil Bandhan Bank

        ಇದು ಸರಿಯಾಗಿದೆ ಸರ್ ಪ್ರತಿ ವರ್ಷ ಮೊದಲು ಚುನಾವಣೆ ನಡಿಬೇಕು ಬ್ರಷ್ಟಾಚಾರ ನಿಲ್ಲಬೇಕು
        5 months ago reply
flipboard facebook twitter whatsapp