social_icon

ಪೊಲೀಸರ ಸೋಗಿನಲ್ಲಿ ದರೋಡೆ ಮಾಡುತ್ತಿದ್ದ ಐವರ ಬಂಧನ

ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ಐವರು ವ್ಯಕ್ತಿಗಳನ್ನು ಮಹಾಲಕ್ಷ್ಮಿ ಲೇಔಟ್ ನ ಪೊಲೀಸರು ಬಂಧಿಸಿದ್ದಾರೆ. 

Published: 16th January 2022 10:25 AM  |   Last Updated: 16th January 2022 10:25 AM   |  A+A-


For representational purposes

ಬಂಧನ (ಸಾಂಕೇತಿಕ ಚಿತ್ರ)

Posted By : srinivasrao
Source : The New Indian Express

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ದರೋಡೆ ಮಾಡಿದ್ದ ಐವರು ವ್ಯಕ್ತಿಗಳನ್ನು ಮಹಾಲಕ್ಷ್ಮಿ ಲೇಔಟ್ ನ ಪೊಲೀಸರು ಬಂಧಿಸಿದ್ದಾರೆ. 

ಈ ಪೈಕಿ ಇಬ್ಬರು ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ತೊಡಗಿದವರಾಗಿದ್ದಾರೆ. ಈ ಗ್ಯಾಂಗ್ ನಲ್ಲಿದ್ದವರು ಮನೆಯನ್ನು ದರೋಡೆ ಮಾಡುವುದಷ್ಟೇ ಅಲ್ಲದೇ, ಮನೆಯ ಮಾಲಿಕ ಹಾಗೂ ಆತನ ಪುತ್ರನನ್ನೂ ಅಪಹರಿಸಿದ್ದರು. 

ಪೊಲೀಸರ ಸೋಗಿನಲ್ಲಿ ಬಂದಿದ್ದ ದರೋಡೆಕೋರರು ಮನೆಯಲ್ಲಿದ್ದ ಚಿನ್ನಾಭರಣ ಸೇರಿದಂತೆ 16 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಇದಷ್ಟೇ ಅಲ್ಲದೇ ಎರಡು ಬೈಕ್ ಗಳನ್ನೂ ದರೋಡೆ ಮಾಡಿದ್ದು ಪೊಲೀಸರು ಬಂಧಿತರಿಂದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳಾದ ಬಾಲಕೃಷ್ಣ, (23) ಚೇತನ್ ಕುಮಾರ್ (27) ಯಲಹಂಕ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಗಳಾಗಿದ್ದು, ಅವರ ಸಹವರ್ತಿಗಳಾದ ಪುನೀತ್ (24) ಪೃಥ್ವಿ (23) ರೋಹನ್ (24) ಬಂಧಿತರ ಆರೋಪಿಗಳಾಗಿದ್ದಾರೆ. 

ಮುಖ್ಯ ಆರೋಪಿ ರೋಹನ್ ಫೋಟೋಗ್ರಾಫರ್ ಆಗಿದ್ದು, ಖಾಸಗಿ ಸ್ಟುಡಿಯೋ ಹೊಂದಿದ್ದಾರೆ ಅಷ್ಟೇ ಅಲ್ಲದೇ ಸಂತ್ರಸ್ತೆ, ಸಿವಿಲ್ ಇಂಜಿಯರ್ ಆಗಿರುವ ಸೌಮ್ಯ ನಾಯ್ಕ್ ಅವರಿಗೆ ಸಂಬಂಧಿಯೂ ಆಗಿದ್ದಾನೆ ಎಂದು ತಿಳಿದುಬಂದಿದೆ.

ರೋಹನ್ ತನ್ನ ಉದ್ಯಮಕ್ಕೆ ಆರ್ಥಿಕ ನೆರವಿನ ಅಗತ್ಯವಿದ್ದಿದ್ದರಿಂದ ಸೌಮ್ಯ ನಾಯ್ಕ್ ಅವರನ್ನು ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದಾನೆ, ಆದರೆ ಇದಕ್ಕೆ ಸೌಮ್ಯ ನಾಯ್ಕ್ ನಿರಾಕರಿಸಿದ್ದಾರೆ. ಇದಾದ ಬಳಿಕ ರೋಹನ್ ತನ್ನ ಸಹಚರರೊಂದಿಗೆ ಸುಬ್ರಹ್ಮಣ್ಯ ನಗರದಲ್ಲಿರುವ ಮನೆಯಲ್ಲಿ ದರೋಡೆಯ ಯೋಜನೆ ರೂಪಿಸಿದ್ದಾರೆ. 

ತಿಪಟೂರು ಪೊಲೀಸರೆಂದು ಹೇಳಿ ನಾಯ್ಕ್ ಅವರು ಕಳ್ಳತನ ಮಾಡಿದ್ದಾರೆ ಈ ಹಿನ್ನೆಲೆಯಲ್ಲಿ ಮನೆಯನ್ನು ಶೋಧಿಸಬೇಕೆಂದು ಹೇಳಿದ್ದಾರೆ. ಇದೇ ವೇಳೆ ರೋಹನ್ ಹಾಗೂ ಮತ್ತಿತರರು ಮನೆಯ ನೆರೆಹೊರೆಯವರ ಚಲನವಲನಗಳನ್ನು ಗಮನಿಸಲು ಮನೆಯ ಹೊರಭಾಗದಲ್ಲಿ ನಿಂತಿದ್ದರು. ಪ್ರಕರಣದ ಸಂಬಂಧ ಇನ್ನೂ ಹಲವು ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. 


Stay up to date on all the latest ರಾಜ್ಯ news
Poll

ಸಿದ್ದರಾಮಯ್ಯ ಸರ್ಕಾರದಿಂದ ಐದು ಗ್ಯಾರಂಟಿಗಳ ಜಾರಿ: ಇತರ ರಾಜ್ಯಗಳ ವಿಧಾನಸಭೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp