social_icon

'ಕಾಂಗ್ರೆಸ್ ಆಳಾಗಿ' ದೇವನೂರು ಮಹಾದೇವ ಕೃತಿ ರಚನೆ ಎಂದ ಪ್ರತಾಪ್ ಸಿಂಹ ವಿರುದ್ಧ ಡಿಎಸ್ ಎಸ್ ಆಕ್ರೋಶ

ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

Published: 19th July 2022 02:08 PM  |   Last Updated: 19th July 2022 02:17 PM   |  A+A-


Pratap_Simha1

ಪ್ರತಾಪ್ ಸಿಂಹ

Posted By : nagaraja
Source : The New Indian Express

ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ  ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಆರ್ ಎಸ್ ಎಸ್ ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದ್ದು, ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಬ್ರಾಹ್ಮಣರು ಶ್ರೇಷ್ಠರು ಎಂದು ಪರಿಗಣಿಸಿದೆ ಎಂದು ಡಿಎಸ್ ಎಸ್ ಮೈಸೂರು ಜಿಲ್ಲಾ ಸಂಘಟಕ ಬೆಟ್ಟಯ್ಯ ಕೋಟೆ ಹೇಳಿದರು.

ಸಮಾಜವನ್ನು ನಿಯಂತ್ರಿಸಲು ಮತ್ತು ವಿಭಿಸಲು ಆರ್ ಎಸ್ ಎಸ್ ವರ್ಣಾಶ್ರಮವನ್ನು ಪ್ರಚೋದಿಸುತ್ತಿದೆ. ಇಂತಹ ಪದ್ಧತಿಗಳನ್ನು ದೇವನೂರು ಮಹಾದೇವ ತಮ್ಮ ಪುಸ್ತಕದಲ್ಲಿ ಖಂಡಿಸಿದ್ದಾರೆ. ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿಯ ಸನಾತನ ಧರ್ಮ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿದಾಗಲೆಲ್ಲ,  ಶ್ರೀರಾಮ ಶಂಬುಕನ ಶಿರಚ್ಛೇದ ಮಾಡಿದದ್ದು, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದ್ದು, ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಮತ್ತು ದೇವದಾಸಿ ಪದ್ಧತಿ, ಬೆತ್ತಲೆ ಸೇವೆ (ಹೆಣ್ಣು ಬಟ್ಟೆ ಧರಿಸಿ ಮೆರವಣಿಗೆ ಮಾಡುವುದು) ಮತ್ತು ಉರುಳು ಸೇವೆ ನಮಗೆ ನೆನಪಾಗುತ್ತವೆ ಎಂದರು. 

ಇದನ್ನೂ ಓದಿ: 'ಕಾಂಗ್ರೆಸ್‌ಗೆ ಆಳಾಗಿ ಬರೆಯುವವರಿಗೆ ಆರೆಸ್ಸೆಸ್‌ನ ಆಳ ಅಗಲ ತಿಳಿಯಲು ಸಾಧ್ಯವಿಲ್ಲ; ರಾಹುಲ್ ಭಾಷಣದಿಂದ ಪ್ರೇರಿತರಾಗಿ  ಕೃತಿ ಬರೆದಂತಿದೆ'

“ನಮಗೆ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ. ಎಲ್ಲರಿಗೂ ಸಮಾನತೆ ಮತ್ತು ಗೌರವವನ್ನು ಸಾರುವ ಬುದ್ಧ ಧರ್ಮ, ಅಂಬೇಡ್ಕರ್ ಧರ್ಮ ಮತ್ತು ಬಸವ ಧರ್ಮವನ್ನು ನಾವು ನಂಬುತ್ತೇವೆ. ಸಂಸದರಾದ ಪ್ರತಾಪ್ ಸಿಂಹ, ವರ್ಣಾಶ್ರಮವನ್ನು ಬೆಂಬಲಿಸಿ ದೇವನೂರು ಮಹಾದೇವ ಅವರನ್ನು ಟೀಕಿಸಿದ್ದಾರೆ, ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ದಲಿತ ಮತ್ತು ಹಿಂದುಳಿದ ಸಮುದಾಯಗಳು ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಆರ್ ಎಸ್ ಎಸ್, ಹಿಂದುತ್ವ ಜಾತಿ ವ್ಯವಸ್ಥೆ ಹೇರುವ ಮುಖವಾಡಗಳು: ದೇವನೂರು ಮಹಾದೇವ

ಕರ್ನಾಟಕ ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ಮುಖ್ಯಸ್ಥ ಶಾಂತರಾಜು ಮಾತನಾಡಿ, ಸಿಂಹ ದಲಿತ ವಿರೋಧಿ ಎಂದರು. ಮಹಾದೇವ ಕಾಂಗ್ರೆಸ್ ಆಳು ಅಲ್ಲ, ಲೇಖಕ ಎಸ್‌ಎಲ್‌ ಭೈರಪ್ಪ ಆರ್‌ಎಸ್‌ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ದೇಶದ ಮೂಲ ನಿವಾಸಿಗಳಾದ ದ್ರಾವಿಡರು ಮತ್ತು ಆರ್ಯರಾದ ಆರ್‌ಎಸ್‌ಎಸ್ ಎಲ್ಲಿಂದ ಬಂದು ವರ್ಣಾಶ್ರಮವನ್ನು ಪ್ರಾರಂಭಿಸಿದರು ಎಂಬುದರ ಕುರಿತು ಹೆಚ್ಚಿನ ಜ್ಞಾನ  ಪಡೆಯಲು ಸಿಂಹ ಹೆಚ್ಚಿನ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp