'ಕಾಂಗ್ರೆಸ್ ಆಳಾಗಿ' ದೇವನೂರು ಮಹಾದೇವ ಕೃತಿ ರಚನೆ ಎಂದ ಪ್ರತಾಪ್ ಸಿಂಹ ವಿರುದ್ಧ ಡಿಎಸ್ ಎಸ್ ಆಕ್ರೋಶ
ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
Published: 19th July 2022 02:08 PM | Last Updated: 19th July 2022 02:17 PM | A+A A-

ಪ್ರತಾಪ್ ಸಿಂಹ
ಮೈಸೂರು: ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ 'ಆರ್ ಎಸ್ ಎಸ್ ಆಳ ಮತ್ತು ಅಗಲ' ಕೃತಿಯನ್ನು ಕಾಂಗ್ರೆಸ್ ಗೆ ಆಳಾಗಿ ಬರೆದಿದ್ದಾರೆ ಎಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ದಲಿತ ಸಂಘರ್ಷ ಸಮಿತಿ ಮತ್ತು ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಆರ್ ಎಸ್ ಎಸ್ ವರ್ಣಾಶ್ರಮದಲ್ಲಿ ನಂಬಿಕೆ ಇಟ್ಟಿದ್ದು, ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸಿ, ಬ್ರಾಹ್ಮಣರು ಶ್ರೇಷ್ಠರು ಎಂದು ಪರಿಗಣಿಸಿದೆ ಎಂದು ಡಿಎಸ್ ಎಸ್ ಮೈಸೂರು ಜಿಲ್ಲಾ ಸಂಘಟಕ ಬೆಟ್ಟಯ್ಯ ಕೋಟೆ ಹೇಳಿದರು.
ಸಮಾಜವನ್ನು ನಿಯಂತ್ರಿಸಲು ಮತ್ತು ವಿಭಿಸಲು ಆರ್ ಎಸ್ ಎಸ್ ವರ್ಣಾಶ್ರಮವನ್ನು ಪ್ರಚೋದಿಸುತ್ತಿದೆ. ಇಂತಹ ಪದ್ಧತಿಗಳನ್ನು ದೇವನೂರು ಮಹಾದೇವ ತಮ್ಮ ಪುಸ್ತಕದಲ್ಲಿ ಖಂಡಿಸಿದ್ದಾರೆ. ಹಿಂದೂ ಧರ್ಮ ಶ್ರೇಷ್ಠ ಸಂಸ್ಕೃತಿಯ ಸನಾತನ ಧರ್ಮ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಹೇಳಿದಾಗಲೆಲ್ಲ, ಶ್ರೀರಾಮ ಶಂಬುಕನ ಶಿರಚ್ಛೇದ ಮಾಡಿದದ್ದು, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳು ಕತ್ತರಿಸಿದ್ದು, ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಮತ್ತು ದೇವದಾಸಿ ಪದ್ಧತಿ, ಬೆತ್ತಲೆ ಸೇವೆ (ಹೆಣ್ಣು ಬಟ್ಟೆ ಧರಿಸಿ ಮೆರವಣಿಗೆ ಮಾಡುವುದು) ಮತ್ತು ಉರುಳು ಸೇವೆ ನಮಗೆ ನೆನಪಾಗುತ್ತವೆ ಎಂದರು.
“ನಮಗೆ ಅಂತಹ ಧರ್ಮದಲ್ಲಿ ನಂಬಿಕೆ ಇಲ್ಲ. ಎಲ್ಲರಿಗೂ ಸಮಾನತೆ ಮತ್ತು ಗೌರವವನ್ನು ಸಾರುವ ಬುದ್ಧ ಧರ್ಮ, ಅಂಬೇಡ್ಕರ್ ಧರ್ಮ ಮತ್ತು ಬಸವ ಧರ್ಮವನ್ನು ನಾವು ನಂಬುತ್ತೇವೆ. ಸಂಸದರಾದ ಪ್ರತಾಪ್ ಸಿಂಹ, ವರ್ಣಾಶ್ರಮವನ್ನು ಬೆಂಬಲಿಸಿ ದೇವನೂರು ಮಹಾದೇವ ಅವರನ್ನು ಟೀಕಿಸಿದ್ದಾರೆ, ಅವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದರೆ ದಲಿತ ಮತ್ತು ಹಿಂದುಳಿದ ಸಮುದಾಯಗಳು ಅವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಆರ್ ಎಸ್ ಎಸ್, ಹಿಂದುತ್ವ ಜಾತಿ ವ್ಯವಸ್ಥೆ ಹೇರುವ ಮುಖವಾಡಗಳು: ದೇವನೂರು ಮಹಾದೇವ
ಕರ್ನಾಟಕ ರಾಜ್ಯ ದಲಿತ ಕಲ್ಯಾಣ ಟ್ರಸ್ಟ್ ಮುಖ್ಯಸ್ಥ ಶಾಂತರಾಜು ಮಾತನಾಡಿ, ಸಿಂಹ ದಲಿತ ವಿರೋಧಿ ಎಂದರು. ಮಹಾದೇವ ಕಾಂಗ್ರೆಸ್ ಆಳು ಅಲ್ಲ, ಲೇಖಕ ಎಸ್ಎಲ್ ಭೈರಪ್ಪ ಆರ್ಎಸ್ಎಸ್ ಮತ್ತು ಬಿಜೆಪಿಯ ವಕ್ತಾರರಂತೆ ವರ್ತಿಸುತ್ತಿದ್ದಾರೆ. ದೇಶದ ಮೂಲ ನಿವಾಸಿಗಳಾದ ದ್ರಾವಿಡರು ಮತ್ತು ಆರ್ಯರಾದ ಆರ್ಎಸ್ಎಸ್ ಎಲ್ಲಿಂದ ಬಂದು ವರ್ಣಾಶ್ರಮವನ್ನು ಪ್ರಾರಂಭಿಸಿದರು ಎಂಬುದರ ಕುರಿತು ಹೆಚ್ಚಿನ ಜ್ಞಾನ ಪಡೆಯಲು ಸಿಂಹ ಹೆಚ್ಚಿನ ಪುಸ್ತಕಗಳನ್ನು ಓದಬೇಕು ಎಂದು ಅವರು ಹೇಳಿದರು.