ಬೆಳಗಾವಿ: ಕೊಲೆ ಆರೋಪಿ ಕಾಲಿಗೆ ಗುಂಡಿಟ್ಟು ಬಂಧಿಸಿದ ಪೊಲೀಸರು

ಬೆಳಗಾವಿ ಪೊಲೀಸರು ಇಂದು ಬೆಳಗ್ಗೆ ಕೊಲೆ ಆರೋಪಿಯೊಬ್ಬನ ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆ. ವಿಶಾಲಸಿಂಗ್ ಚವ್ಹಾಣ್ ಬಂಧಿತ ಆರೋಪಿ. 
ರೌಡಿ ವಿಶಾಲ್ ಸಿಂಗ್ ರಜಪೂತ್
ರೌಡಿ ವಿಶಾಲ್ ಸಿಂಗ್ ರಜಪೂತ್

ಬೆಳಗಾವಿ: ಬೆಳಗಾವಿ ಪೊಲೀಸರು ಇಂದು ಬೆಳಗ್ಗೆ ಕೊಲೆ ಆರೋಪಿಯೊಬ್ಬನ ಕಾಲಿಗೆ ಗುಂಡಿಟ್ಟು ಬಂಧಿಸಿದ್ದಾರೆ. ವಿಶಾಲಸಿಂಗ್ ಚವ್ಹಾಣ್ ರಜಪೂತ ಬಂಧಿತ ಆರೋಪಿ. 

ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ ಎಂಬವರನ್ನು ಕೊಲೆ ಮಾಡಿ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಇಲ್ಲಿನ ವೀರಭದ್ರ ನಗರದ ಮನೆಯೊಂದರಲ್ಲಿ ಸೋಮವಾರ ರಾತ್ರಿ ಅಡಗಿರುವ ಮಾಹಿತಿ ಆಧಾರದ ಮೇಲೆ ಇಂದು ಮುಂಜಾನೆ 5ರ ಸುಮಾರಿಗೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ವೇಳೆ ಗುಂಡು ಹಾರಿಸಿ ಬಂಧಿಸಲಾಯಿತು ಎಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರೊಬ್ಬರು ತಿಳಿಸಿದ್ದಾರೆ.ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿ ವಿಶಾಲ ಸಿಂಗ್ ಚವ್ಹಾಣ್ ಪೊಲೀಸರಿಗೆ ಬೇಕಾಗಿದ್ದ ಎನ್ನಲಾಗಿದೆ.

ಬೆಳಗಾವಿಯ ಭವಾನಿ ನಗರದಲ್ಲಿ ಕಳೆದ ಮಾರ್ಚ್ 15 ರಂದು  ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ ಹತ್ಯೆಯಾಗಿತ್ತು. ವಿಶಾಲ್ ಸಿಂಗ್ ರಜಪೂತ್ ಈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ರಾಜು ಮೂವರನ್ನು ವಿವಾಹವಾಗಿದ್ದರು. ಅವರ ಕೊಲೆಗೆ ಎರಡನೇ ಪತ್ನಿ ಕಿರಣ್  ದೊಡ್ಡ ಬೊಮ್ಮನವನವರ ಖಾಸಬಾಗ್ ನಿವಾಸಿ ಧರಣೇಂದ್ರ ಘಂಟಿ (52) ಮತ್ತು ಹಿಂಡವಾಡಿ ನಿವಾಸಿ ಶಶಿಕಾಂತ ಶಂಕರಗೌಡ (49) ನೆರವು ಪಡೆದಿದ್ದಾರೆ. 

ಧರಣೇಂದ್ರ ಮತ್ತು ಶಶಿಕಾಂತ್ ಹತ್ಯೆಗೀಡಾದ ದೊಡ್ಡಬೊಮ್ಮನವರ ಅವರ ವ್ಯಾಪಾರ ಪಾಲುದಾರರಾಗಿದ್ದರು. ಕಿರಣ್ ದೊಡ್ಡಬೊಮ್ಮನವರ ತನ್ನ ಪತಿಯನ್ನು ಹತ್ಯೆ ಮಾಡಲು ರಜಪೂತ್ ನೇತೃತ್ವದ ಗ್ಯಾಂಗ್‌ಗೆ 10 ಲಕ್ಷ ರೂಪಾಯಿಗಳ ಸುಪಾರಿ ನೀಡಿದ್ದಳು. ಆರೋಪಿಗಳಾದ ಕಿರಣ್, ಧರಣೇಂದ್ರ ಮತ್ತು ಶಶಿಕಾಂತ್ ಅವರನ್ನು ಬಂಧಿಸಲಾಗಿತ್ತು. ಆದರೆ. ಆದರೆ ರಜಪೂತ್ ಮತ್ತು ಗ್ಯಾಂಗ್ ತಲೆಮರೆಸಿಕೊಂಡಿದ್ದರು.

ಆರೋಪಿ ಕಾಲಿಗೆ ಎಸಿಬಿ ನಾರಾಯಣ ಭರಮನಿ ಹೊಡೆದ ಗುಂಡು ತಗುಲಿದ್ದು, ಆತ ಸದ್ಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com