ಪ್ರಧಾನಿ ಮೋದಿ ಸಂಚರಿಸಿದ್ದ ಯಾವುದೇ ರಸ್ತೆಗೆ ಹಾನಿಯಾಗಿಲ್ಲ: ಪಿಎಂಒಗೆ ಬಿಬಿಎಂಪಿ ವರದಿ
ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಸಂಚರಿಸಿದ್ದ ಯಾವುದೇ ರಸ್ತೆಗಳೂ ಹಾನಿಗೊಳಗಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದೆ.
Published: 28th June 2022 08:58 AM | Last Updated: 28th June 2022 08:58 AM | A+A A-

ಬಿಬಿಎಂಪಿ ಆಯುಕ್ತ
ಬೆಂಗಳೂರು: ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಸಂಚರಿಸಿದ್ದ ಯಾವುದೇ ರಸ್ತೆಗಳೂ ಹಾನಿಗೊಳಗಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರಧಾನಿ ಕಚೇರಿಗೆ ಮಾಹಿತಿ ನೀಡಿದೆ.
ಪ್ರಧಾನಿ ಆಗಮನದ ಹಿನ್ನಲೆಯಲ್ಲಿ ಕೋಟ್ಯಂತರ ರೂಗಳ ವೆಚ್ಚದಲ್ಲಿ ದುರಸ್ತಿಯಾಗಿದ್ದ ಬೆಂಗಳೂರಿನ ಕೆಲ ರಸ್ತೆಗಳು ಪ್ರಧಾನಿ ಹಿಂದುರಿಗಿದ ಕೆಲವೇ ದಿನಗಳಲ್ಲಿ ಹಾನಿಗೊಳಗಾಗಿತ್ತು ಎಂದು ವರದಿಯಾಗಿತ್ತು. ರಸ್ತೆಗಳ ಹದಗೆಟ್ಟ ಬಗ್ಗೆ ಟೀಕೆಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಉತ್ತಮ ಸಮನ್ವಯತೆಗಾಗಿ ಬಿಬಿಎಂಪಿ ಸೋಮವಾರ ಇತರೆ ನಾಗರಿಕ ಸಂಸ್ಥೆಗಳೊಂದಿಗೆ ಸಭೆ ನಡೆಸಿದ್ದು, ರಸ್ತೆಗಳ ಸ್ಥಿತಿಗತಿ ಕುರಿತು ಪ್ರಧಾನಿ ಕಚೇರಿಗೆ (ಪಿಎಂಒ) ಸಕಾರಾತ್ಮಕ ವರದಿ ಕಳುಹಿಸಿದೆ. ಆದರೆ ಈ ವರದಿಯಲ್ಲಿ ಪ್ರಧಾನಿ ಮೋದಿ ಸಂಚರಿಸಿದ್ದ ಯಾವುದೇ ರಸ್ತೆಗಳೂ ಹಾನಿಗೊಳಗಾಗಿಲ್ಲ ಎಂದು ವರದಿ ನೀಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಧಾನಿ ಭೇಟಿ ವೇಳೆ ಕಳಪೆ ಕಾಮಗಾರಿ: ಬಿಬಿಎಂಪಿಯಿಂದ ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ
ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಮತ್ತು ಆಡಳಿತಾಧಿಕಾರಿ ರಾಕೇಶ್ ಸಿಂಗ್ ಸಭೆಯಲ್ಲಿ ಭಾಗವಹಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಗಿರಿನಾಥ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನಿರ್ದೇಶನದ ಅನುಸರಣೆಯಂತೆ ಸಭೆ ಕರೆಯಲಾಗಿದೆ ಎಂದರು. ಈ ಮಧ್ಯೆ, ಬಿಬಿಎಂಪಿ ನಾಲ್ಕು ಪುಟಗಳ ವರದಿಯಲ್ಲಿ ಪಿಎಂಒಗೆ ತಿಳಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಭೇಟಿಯ ವೇಳೆ ಪ್ರಯಾಣಿಸಿದ ಯಾವುದೇ ಹಾನಿ ಸಂಭವಿಸಿಲ್ಲ. BASE ಬಳಿ ದುರಸ್ತಿಗೀಡಾಗಿದ್ದ ರಸ್ತೆಯು ಪ್ರಧಾನಿಯವರ ಪ್ರಯಾಣದ ಮಾರ್ಗದಲ್ಲಿ ಇರಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.
ಆದರೆ ಇದರ ಹೊರತಾಗಿಯೂ, ಪೌರಕಾರ್ಮಿಕ ಸಂಸ್ಥೆಯು ಮೂವರು ಎಂಜಿನಿಯರ್ಗಳಿಗೆ ಶೋಕಾಸ್ ನೋಟಿಸ್ ಕಳುಹಿಸಿದ್ದು ಮಾತ್ರವಲ್ಲದೇ ಕಳಪೆ ಕಾಮಗಾರಿಗಾಗಿ ಗುತ್ತಿಗೆದಾರನಿಗೆ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪಿಎಂಒಗೆ ಕಳುಹಿಸಲಾದ ವರದಿಯನ್ನು ಸ್ಪಷ್ಟಪಡಿಸಿದ ಗಿರಿನಾಥ್, ನವೆಂಬರ್ 2021 ರಲ್ಲಿ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ ಮತ್ತು ಏಪ್ರಿಲ್-ಮೇ ತಿಂಗಳಲ್ಲಿ ಸೋರಿಕೆ ಕಂಡುಬಂದಿದೆ ಎಂದು ಹೇಳಿದರು. ಸಿಂಕ್ ಹೋಲ್ ಬೇಸ್ಗೆ ಸಮೀಪದಲ್ಲಿ ಕಂಡುಬಂದಿದೆಯೇ ಹೊರತು ಪ್ರಧಾನಿ ಪ್ರಯಾಣಿಸುವ ರಸ್ತೆಯಲ್ಲ ಎಂದು ಅವರು ಒತ್ತಿ ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿ ಬೆಂಗಳೂರು ಭೇಟಿಗಾಗಿ ಬಿಬಿಎಂಪಿಯಿಂದ ಬರೊಬ್ಬರಿ 24 ಕೋಟಿ ರೂ. ಖರ್ಚು!
“ಪ್ರಧಾನಿ ಅವರ ಭೇಟಿಯ ಸಮಯದಲ್ಲಿ ನಾವು ಅನೇಕ ಪ್ಯಾಚ್ಗಳನ್ನು ಕವರ್ ಮಾಡಲು ಯೋಜಿಸುತ್ತಿರುವುದರಿಂದ, ನಾವು ಅದನ್ನು ಸಹ ಕವರ್ ಮಾಡಿದ್ದೇವೆ. ಇಲ್ಲಿ ಎರಡು ಹೋಲ್ ಗಳು ಕಂಡುಬಂದಿವೆ. ಬಿಡಬ್ಲ್ಯೂಎಸ್ಎಸ್ಬಿಯ ಡಕ್ಟೈಲ್ ಕಬ್ಬಿಣದ ಲೈನ್ ಉತ್ತಮವಾಗಿದೆ. ಆದರೆ ಹಳೆಯ ಸಿಎಂಸಿ ಪೈಪ್ ನಿಷ್ಕ್ರಿಯವಾಗಿದ್ದು, ಮಳೆ ಬಂದಾಗ, ಸೋರುವಿಕೆ ಹೊರಬರುತ್ತದೆ ಮತ್ತು ಅದರ ಕಡಿಮೆ ಹಂತದಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಆದ್ದರಿಂದ ಅದು ಮುಳುಗಿ ರಸ್ತೆ ಕಿತ್ತು ಬಂದಿದೆ. ನಾವು ಅದನ್ನು ಕಾಂಕ್ರೀಟ್ ಮಾಡಿ ಸರಿಪಡಿಸುತ್ತೇವೆ ಎಂದು ಅವರು ಹೇಳಿದರು.
ಮರಿಯಪ್ಪನಪಾಳ್ಯ ರಸ್ತೆಯ ಕಿತ್ತು ಹೋಗಿರುವ ಬಗ್ಗೆ ಪಾಲಿಕೆ ಇನ್ನೂ ವಿಚಾರಿಸುತ್ತಿದೆ ಎಂದು ತಿಳಿಸಿದ ಅವರುಸ ವರದಿ ಬಂದ ನಂತರ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಪಿಎಂಒ (ಮರಿಯಪ್ಪನಪಾಳ್ಯ ಬಗ್ಗೆ) ಕೇಳಿಲ್ಲ. ಪ್ರಧಾನಿ ಪ್ರಯಾಣಿಸಿದ ರಸ್ತೆಗಳ ವರದಿಗಳ ಬಗ್ಗೆ ಮಾತ್ರ ವಿವರಗಳನ್ನು ಕೇಳಿದೆ. ಅದಕ್ಕೆ ಮಾತ್ರ ಉತ್ತರ ಕಳುಹಿಸಿದ್ದೇವೆ. ನಮ್ಮ ಟಿವಿಸಿಸಿ ಆಳ ಮತ್ತು ಬಿಟುಮೆನ್ ಅನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.