ಶಿವಕುಮಾರ್ ಉದಾಸಿಯಿಂದ ಜೈಶಂಕರ್ ಭೇಟಿ, ಉಕ್ರೇನ್ನಿಂದ ಶೀಘ್ರ ನವೀನ್ ಮೃತದೇಹ ತರುವಂತೆ ಮನವಿ
ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ಬುಧವಾರ ದೆಹಲಿಯಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿ, ರಷ್ಯಾ ದಾಳಿಯಲ್ಲಿ ಮೃತಪಟ್ಟ ನವೀನ್ ಜ್ಞಾನಗೌಡ...
Published: 03rd March 2022 03:58 PM | Last Updated: 03rd March 2022 04:10 PM | A+A A-

ಶಿವಕುಮಾರ್ ಉದಾಸಿಯಿಂದ ಜೈಶಂಕರ್ ಭೇಟಿ
ದಾವಣಗೆರೆ: ಹಾವೇರಿ ಸಂಸದ ಶಿವಕುಮಾರ್ ಉದಾಸಿ ಅವರು ಬುಧವಾರ ದೆಹಲಿಯಲ್ಲಿ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರನ್ನು ಭೇಟಿ ಮಾಡಿ, ರಷ್ಯಾ ದಾಳಿಯಲ್ಲಿ ಮೃತಪಟ್ಟ ನವೀನ್ ಜ್ಞಾನಗೌಡ ಅವರ ಮೃತದೇಹವನ್ನು ಉಕ್ರೇನ್ನಿಂದ ಭಾರತಕ್ಕೆ ಶೀಘ್ರ ತರುವಂತೆ ಮನವಿ ಮಾಡಿದರು.
ಉದಾಸಿ ಅವರು ತಮ್ಮ ಪತ್ರದ ಜೊತೆ ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಕೇಂದ್ರ ಸಚಿವರಿಗೆ ಸಲ್ಲಿಸಿದ್ದಾರೆ ಮತ್ತು ಅವರನ್ನು ಭಾರತಕ್ಕೆ ಸ್ಥಳಾಂತರಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಉಕ್ರೇನ್ ನಿಂದ ವಾಪಸಾಗಲು ವಿದ್ಯಾರ್ಥಿಗಳ ತವಕ: ಉತ್ತರ ಕರ್ನಾಟಕದಲ್ಲಿ ಹೆಚ್ಚಿದ ಪೋಷಕರ ಆತಂಕ!
ಇಂದು ದೆಹಲಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಉದಾಸಿ ಅವರು, ಡಾ ಜೈಶಂಕರ್ ತುಂಬಾ ವಿನಮ್ರರಾಗಿದ್ದಾರೆ ಮತ್ತು ಬಾಂಬ್ ದಾಳಿಯಲ್ಲಿ ಸಾವನ್ನಪ್ಪಿದ ಉಕ್ರೇನ್ನ ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ನಾಲ್ಕನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯ ಮೃತದೇಹವನ್ನು ಮರಳಿ ತರಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.
"ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಉಕ್ರೇನ್ನಿಂದ ಸ್ಥಳಾಂತರಿಸಲಾಗುವುದು ಎಂದು ಕೇಂದ್ರ ಸಚಿವರು ಹೇಳಿರುವುದಾಗಿ" ಎಂದು ಉದಾಸಿ ತಿಳಿಸಿದರು.
ಉದಾಸಿ ಅವರು ಇನ್ನೂ ಕೆಲವು ದಿನಗಳ ಕಾಲ ದೆಹಲಿಯಲ್ಲಿಯೇ ಇರುವುದಾಗಿ ಮತ್ತು ಉಕ್ರೇನ್ ನಲ್ಲಿ ಸಿಲುಕಿದ ಕರ್ನಾಟಕ ವಿದ್ಯಾರ್ಥಿಗಳನ್ನು ಸ್ಥಳಾಂತರಿಸುವ ಬಗ್ಗೆ ಮತ್ತು ನವೀನ್ ಅವರ ಮೃದೇಹ ಹಿಂದಿರುಗಿಸುವ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವುದಾಗಿ ಹೇಳಿದ್ದಾರೆ.