social_icon

ಮೈಸೂರು: ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಸಿದ್ಧ ಕವಿಗಳ ಸಂಬಂಧಿಕರ ಕೇಸ್ 53 ವರ್ಷಗಳ ನಂತರ ಇತ್ಯರ್ಥ!

ಕವಿಗಳಾದ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌ ಮತ್ತು ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿಕರಿಗೆ ಸಂಬಂಧಿಸಿದ ರಾಜ್ಯದಲ್ಲೇ ಸುದೀರ್ಘವಾದ ಸಿವಿಲ್‌ ವಿವಾದ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ. 

Published: 15th March 2022 10:36 AM  |   Last Updated: 15th March 2022 02:37 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : The New Indian Express

ಮೈಸೂರು: ಕನ್ನಡದ ಪ್ರಸಿದ್ಧ ಕವಿಗಳಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ಮತ್ತು ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿಕರನ್ನು ಒಳಗೊಂಡ ರಾಜ್ಯದ ಸುದೀರ್ಘ ನಾಗರಿಕ ವಿವಾದಗಳಲ್ಲಿ ಒಂದನ್ನು 53 ವರ್ಷಗಳ ನಂತರ ಲೋಕ ಅದಾಲತ್‌ನಲ್ಲಿ  ಇತ್ಯರ್ಥಗೊಳಿಸಲಾಗಿದೆ. 

ಕನ್ನಡ  ಕವಿಗಳಾದ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌ ಮತ್ತು ಗೋಪಾಲಕೃಷ್ಣ ಅಡಿಗ ಅವರ ಸಂಬಂಧಿಕರಿಗೆ ಸಂಬಂಧಿಸಿದ ರಾಜ್ಯದಲ್ಲೇ ಸುದೀರ್ಘವಾದ ಸಿವಿಲ್‌ ವಿವಾದ ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ. 

ಕವಿಗಳ ಸಂಬಂಧಿಕರು ಎಂದು ಹೇಳಲಾಗಿರುವ ಈ ಕುಟುಂಬವೊಂದರಲ್ಲಿ ಐವರು ಪುತ್ರರು, ನಾಲ್ವರು ಪುತ್ರಿಯರಿದ್ದರು. ತಂದೆ ತೀರಿಕೊಂಡ ನಂತರ ಗಂಡು ಮಕ್ಕಳು ಆಸ್ತಿಯನ್ನು ಹಂಚಿಕೊಂಡರು. ಆಗ ಹೆಣ್ಣು ಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲಿದೆ ಎಂಬ ಕಾನೂನು ಇರಲಿಲ್ಲ. ತಾಯಿ ಹೆಸರಲ್ಲಿ ಒಂದು ಪಾಲು ಆಸ್ತಿಯ ಹಣವಿತ್ತು.

1969 ರಲ್ಲಿ ತಾಯಿಯ ಹೆಸರಲ್ಲಿದ್ದ 64 ಲಕ್ಷ ರು ಹಣವನ್ನು ತಮಗೆ ನೀಡಬೇಕೆಂದು ಹೆಣ್ಣು ಮಕ್ಕಳು ಕೇಳಿದಾಗ ಸಹೋದರರು ಇದನ್ನು ಒಪ್ಪಲಿಲ್ಲ. ಆ ಹಣವನ್ನು 9 ಮಂದಿ ಮಕ್ಕಳಿಗೂ ಸಮಾನವಾಗಿ ಹಂಚುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ಎರಡು ಪೀಳಿಗೆಯಾದರೂ ದಾವೆ ಇತ್ಯರ್ಥವಾಗಲಿಲ್ಲ.

ಗಂಡು ಮಕ್ಕಳಿಂದ ಆಸ್ತಿ ಖರೀದಿಸಿದವರೂ ಪ್ರಕರಣದಲ್ಲಿ ಕಕ್ಷಿದಾರರಾದರು. ಒಟ್ಟು ಈ ಪ್ರಕರಣದಲ್ಲಿ 40 ಮಂದಿ ಕಕ್ಷಿದಾರರಿದ್ದರು. ಹತ್ತು ಮಂದಿ ವಕೀಲರಿದ್ದರು. ಇವರೆಲ್ಲರನ್ನೂ ಸೇರಿಸಿ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥ ಪಡಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಆಯೋಜಿಸಿದ್ದ ಲೋಕ ಅದಾಲತ್‌ನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಲ್.ರಘುನಾಥ್ ಮಾತನಾಡಿ, ಕುಟುಂಬದ ಆಸ್ತಿಯಲ್ಲಿ ಸಹೋದರರಿಗೆ ಸಮಾನ ಪಾಲು ದೊರೆತಿದ್ದು, ನಾಲ್ವರು ಸಹೋದರಿಯರಿಗೆ ಯಾವುದೇ ಪಾಲು ಸಿಕ್ಕಿರಲಿಲ್ಲ. ಈ ಮಧ್ಯೆ, ಸಹೋದರರು ತಮ್ಮ ಪಾಲನ್ನು ಇತರರಿಗೆ ಮಾರಿದ್ದರು ಎಂದು ಮಾಹಿತಿ ನೀಡಿದರು.

ಆದರೆ, 1969 ರಲ್ಲಿ ಹೆಣ್ಣು ಮಕ್ಕಳು ತಮ್ಮ ತಾಯಿಯ ಹೆಸರಿನಲ್ಲಿದ್ದ 64 ಲಕ್ಷ ರೂ. ತಾಯಿಯ ಮೊತ್ತದಲ್ಲಿ ಸಮಾನ ಪಾಲು ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದರು. ತಾಯಿ ಹೆಸರಲ್ಲಿದ್ದ 64 ಲಕ್ಷ ರೂಪಾಯಿ ಹಣವನ್ನು ಹೆಣ್ಣು ಮಕ್ಕಳು ಕೇಳಿದಾಗ, ಗಂಡು ಮಕ್ಕಳು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಆಗ ಹೆಣ್ಣು ಮಕ್ಕಳು ನ್ಯಾಯಾಲಯದಲ್ಲಿ ದಾವೆ ಹೂಡಿದರು.

ಈ ಪ್ರಕರಣವು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ಎನ್‌ಎಲ್‌ಎಸ್‌ಎ) ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಯು.ಯು ಲಲಿತ್ ಅವರ ಗಮನವನ್ನೂ ಸೆಳೆಯಿತು.

ಪ್ರಕರಣದ ಕಕ್ಷಿದಾರ ಮಹಿಳೆಯೊಬ್ಬರು ಆಸ್ಪತ್ರೆಯ ಐಸಿಯುನಲ್ಲಿ ಆಕ್ಸಿಜನ್ ಯಂತ್ರದ ಮೂಲಕ ಉಸಿರಾಡುತ್ತಿದ್ದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಭಾಗವಹಿಸಿದರು. ಈ ಮಹಿಳೆಯ ಮನವಿಯನ್ನು ನ್ಯಾಯಮೂರ್ತಿ ಲಲಿತ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಆಲಿಸಿದರು.

ತಮ್ಮ ತಾಯಿಯ ಹಣದಲ್ಲಿ ಸಮಾನ ಪಾಲು ಕೇಳುತ್ತಿದ್ದ ಸಹೋದರರು ಕುಟುಂಬದ ಆಸ್ತಿಯನ್ನು ತಮ್ಮ ಸಹೋದರಿಯರೊಂದಿಗೆ ಹಂಚಿಕೊಳ್ಳಲು ಕೇಳಿಕೊಂಡರು. ನಂತರ ಅವರು ತಮ್ಮ ಬೇಡಿಕೆಯಿಂದ ಹಿಂದೆ ಸರಿದಿದ್ದು, ಅರ್ಜಿದಾರರ ವಾರಸುದಾರರಿಗೆ ಹಣವನ್ನು ಸಮಾನವಾಗಿ ವಿತರಿಸಲಾಗಿದೆ'' ಎಂದು ಹೇಳಿದರು.
 


Stay up to date on all the latest ರಾಜ್ಯ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp