ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ಡಿವೈಎಸ್ಪಿ ಕಪಾಳ ಮೋಕ್ಷ, ಮನುಷ್ಯತ್ವವಿಲ್ಲದ ಸರ್ಕಾರ- ಸಿದ್ದು

ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ತುಮಕೂರು ಡಿವೈಎಸ್ಪಿ ಪಿ. ಶ್ರೀನಿವಾಸ್ ಕಪಾಳ ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದೆ.
ಡಿವೈಎಸ್ಪಿ ಕಪಾಳ ಮೋಕ್ಷ, ಸಿದ್ದರಾಮಯ್ಯ
ಡಿವೈಎಸ್ಪಿ ಕಪಾಳ ಮೋಕ್ಷ, ಸಿದ್ದರಾಮಯ್ಯ

ತುಮಕೂರು: ಪಿಎಸ್ ಐ ನೇಮಕಾತಿ ಪ್ರಕರಣದ ಸಂತ್ರಸ್ತರಿಗೆ ತುಮಕೂರು ಡಿವೈಎಸ್ಪಿ ಪಿ. ಶ್ರೀನಿವಾಸ್ ಕಪಾಳ ಮಾಡಿದ್ದಾರೆ ಎಂದು ಆರೋಪಿಸಲಾದ ವಿಡಿಯೋ ವೈರಲ್ ಆಗಿದೆ.

ನೇಮಕಾತಿ ಹಗರದಿಂದ ಎದುರಿಸುತ್ತಿರುವ ಸಮಸ್ಯೆಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೊಂದಿಗೆ ಹೇಳಿಕೊಳ್ಳಲು ಬಂದವರಿಗೆ ಡಿವೈಎಸ್ಪಿ ಕಪಾಳ ಮೋಕ್ಷ ಮಾಡಿದ್ದಾರೆ. 

ಈ ಕುರಿತಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಇದು ಮನುಷ್ಯತ್ವವಿಲ್ಲದ ಸರ್ಕಾರ, ಈ ರೀತಿಯ ಘಟನೆಗಳು ಯಾವಾಗಲೂ ನಡೆಯುತ್ತಲೇ ಇವೆ. ವಾರದ ಹಿಂದಷ್ಟೇ  ವಸತಿ ಸಚಿವ ವಿ. ಸೋಮಣ್ಣ ಅವರು ಮಹಿಳೆಯರೊಬ್ಬರಿಗೆ ಕಪಾಳ ಮೋಕ್ಷ ಮಾಡಿದ್ದರು. ಈ ರೀತಿಯ ಸಚಿವರು ರಾಜ್ಯದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com