ಕೋಲಾರ: ನಾಲ್ಕನೆಯದ್ದೂ ಹೆಣ್ಣು ಮಗು ಆಗಿದ್ದಕ್ಕೆ ಮನನೊಂದ ತಂದೆ ನೇಣಿಗೆ ಶರಣು..!

ನಾಲ್ಕನೆಯದ್ದು ಹೆಣ್ಣು ಮಗು ಆಗಿದ್ದಕ್ಕೆಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ  ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೋಲಾರ: ನಾಲ್ಕನೆಯದ್ದು ಹೆಣ್ಣು ಮಗು ಆಗಿದ್ದಕ್ಕೆಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ  ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನಲ್ಲಿ ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಗ್ರಾಮದ ಲೋಕೇಶ್ (35) ಆತ್ಮಹತ್ಯೆಗೆ ಶರಣಾಗಿದ್ದಾನೆ. ಲೋಕೇಶ್ ಈಗಾಗಲೇ ಮೂರು ಮಕ್ಕಳಿಗೆ ತಂದೆಯಾಗಿದ್ದು ಇದೀಗ ಜನಿಸಿರುವ ನಾಲ್ಕನೇ ಮಗುವು ಹೆಣ್ಣು ಆಗಿದ್ದರಿಂದ ಮನನೊಂದಿದ್ದ.

ಮೃತ ಲೋಕೇಶ್‌ ದಂಪತಿಗೆ ಈ ಹಿಂದೆಯೇ ಮೂವರು ಹೆಣ್ಣು ಮಕ್ಕಳಿದ್ದರು, ಗಂಡು ಮಗುವಿನ ಆಸೆಗೆ ನಾಲ್ಕನೇ ಮಗು ಮಾಡಿಕೊಂಡಿದ್ದಾನೆ. ಆದ್ರೆ ಅವನ ನಿರೀಕ್ಷೆ ಫಲಿಸದೆ ನಾಲ್ಕನೇ ಮಗುವೂ ಸಹ ಹೆಣ್ಣು ಆಗಿರುವ ಕಾರಣ ಮನನೊಂದ ಲೋಕೇಶ್‌ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮನೆಯಲ್ಲಿ ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇನ್ನು ಮೃತ ಲೋಕೇಶ್ ಈ ಹಿಂದೆ ಮೂರನೇ ಮಗು ಜನನವಾದಾಗಲೇ ಆತ್ಮಹತ್ಯೆಗೆ ಯತ್ನ ಮಾಡಿದ್ದನಂತೆ. ಆದ್ರೆ ಅದೃಷ್ಟವಶಾತ್ ಮನೆಯವರಿಗೆ ವಿಚಾರ ತಿಳಿದು ಲೋಕೇಶ್‌ನನ್ನು ಬದುಕಿಸಿದ್ದಾರೆ.  ಈ ಸಂಬಂಧ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com