social_icon

ವೈದ್ಯರ ಅಮಾನತು ಹಿಂಪಡೆಯಿರಿ: ಗರ್ಭಿಣಿ-ಅವಳಿ ಶಿಶುಗಳ ಸಾವಿನ ಪ್ರಕರಣ ಸಂಬಂಧ ವೈದ್ಯಾಧಿಕಾರಿಗಳ ಸಂಘ ಒತ್ತಾಯ

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿದ್ದ ಕರ್ತವ್ಯ ನಿರತ ವೈದ್ಯೆ ಡಾ.ಉಷಾ ಎ.ಆರ್ ಅವರ ಬೆಂಬಲಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿಂತಿದೆ. ಸಂಘದ ನಿಯೋಗ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಅಮಾನತು ಹ

Published: 08th November 2022 09:23 AM  |   Last Updated: 08th November 2022 02:24 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು: ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಿ ಗರ್ಭಿಣಿ ಹಾಗೂ ಆಕೆಯ ಅವಳಿ ಶಿಶುಗಳು ಸಾವಿಗೀಡಾದ ಪ್ರಕರಣ ಹಿನ್ನೆಲೆಯಲ್ಲಿ ಅಮಾನತಿಗೆ ಒಳಗಾಗಿದ್ದ ಕರ್ತವ್ಯ ನಿರತ ವೈದ್ಯೆ ಡಾ. ಉಷಾ ಎ.ಆರ್ ಅವರ ಬೆಂಬಲಕ್ಕೆ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಿಂತಿದೆ. ಸಂಘದ ನಿಯೋಗ ಸೋಮವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿ ಅಮಾನತು ಹಿಂಪಡೆಯುವಂತೆ ಮನವಿ ಮಾಡಿದ್ದು, ಸಾವಿಗೆ ಡಾ.ಉಷಾ ಹೊಣೆಯಲ್ಲ ಎಂದು ಹೇಳಿದ್ದಾರೆ. 

ಮರಣಕ್ಕೀಡಾದ 30 ವರ್ಷದ ಗರ್ಭಿಣಿ ಕಸ್ತೂರಿ ತನ್ನ ನೆರೆಮನೆಯ ಸರೋಜಮ್ಮ ಅವರೊಂದಿಗೆ ಆಸ್ಪತ್ರೆಗೆ ಬಂದಾಗ ವೈದ್ಯರು ಆಪರೇಷನ್ ಥಿಯೇಟರ್ (OT) ನಲ್ಲಿದ್ದಾರೆ ಎಂದು ಹೇಳಿದ್ದರು. ಕಾರ್ಯನಿರತ ಗೃಹ ಶಸ್ತ್ರಚಿಕಿತ್ಸಕರೊಬ್ಬರು ಉಷಾ ಅವರಿಗೆ ಮಾಹಿತಿ ನೀಡಿದ ನಂತರ, ಅವರು ಮಹಿಳೆಯನ್ನು ಪರೀಕ್ಷೆ ಮಾಡಲು ಬಂದರು. ಕೆಲವು ಪರೀಕ್ಷೆಗಳಿಗೆ ಒಳಗಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಆದರೆ ಮಹಿಳೆಯೇ ಮನೆಗೆ ಹೋಗುತ್ತೇನೆ ಎಂದು ಹಠಮಾಡಿದ್ದಳು ಎಂದು ಸಂಘದ ಅಧ್ಯಕ್ಷ ಚೇತನ್ ಎಂ ಆರೋಗ್ಯ ಸಚಿವರಿಗೆ ಹೇಳಿದ್ದಾರೆ.

ಅಮಾನತುಗೊಂಡ ವೈದ್ಯೆ ಸಂಘಕ್ಕೆ ಪತ್ರ ಬರೆದಿದ್ದು ಅದನ್ನು ಆರೋಗ್ಯ ಸಚಿವರಿಗೆ ನೀಡಿದ್ದಾರೆ. ಪತ್ರದಲ್ಲಿ ವೈದ್ಯೆ, ನಾನು ನವೆಂಬರ್ 2ರಂದು ಸಂಜೆ 5ರಿಂದ ರಾತ್ರಿ 9.30ರ ಮಧ್ಯೆ 8 ಸರ್ಜರಿಗಳನ್ನು ಮಾಡಿದ್ದೆ. ಈ ಮಧ್ಯೆ ತೀರಿಹೋದ ಮಹಿಳೆ ಇನ್ನೊಬ್ಬರ ಜೊತೆ ಕಾರಿಡಾರ್ ನಲ್ಲಿ ನಿಂತಿರುವುದನ್ನು ನೋಡಿದ್ದೆ. ಆಕೆ ದಾಖಲೆಗಳನ್ನು ಕೊಡಲು ನಿರಾಕರಿಸಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾಳೆ ಎಂದು ಸ್ನಾತಕೋತ್ತರ ವೈದ್ಯೆ ಮತ್ತು ನರ್ಸ್ ಒಬ್ಬರಿಂದ ತಿಳಿಯಿತು. ನವೆಂಬರ್ 4ರಂದು ಸಚಿವರು ಮತ್ತು ಆಯುಕ್ತರು ನನ್ನನ್ನು ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತು ಮಾಡಿದರು ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಅವಳಿ ಶಿಶು ಸಾವು; ವೈದ್ಯೆ, ಮೂವರು ನರ್ಸ್ ಸಸ್ಪೆಂಡ್- ಸಚಿವ ಸುಧಾಕರ್

ಈ ಬಗ್ಗೆ DHO ಡಾ ಮಂಜುನಾಥ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಇಲಾಖಾ ವಿಚಾರಣೆ ಪ್ರಗತಿಯಲ್ಲಿದೆ. ಸಂಬಂಧಪಟ್ಟ ಪ್ರಾಧಿಕಾರವು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಆಗಿರುವ ಘಟನೆ, ಸತ್ಯಾಸತ್ಯತೆ ಹೊರಬರಲಿದೆ ಎಂದರು.ಈ ಮಧ್ಯೆ, ಕರ್ತವ್ಯನಿರತ ವೈದ್ಯರು ಮತ್ತು ಮೂವರು ಸ್ಟಾಫ್ ನರ್ಸ್‌ಗಳನ್ನು ವಜಾಗೊಳಿಸುವಂತೆ ಒತ್ತಾಯಿಸಿ ನಾಗರಿಕ ಸಮಾಜದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಈ ಘಟನೆಯ ಬಳಿಕ ರಾಜ್ಯ ಸರ್ಕಾರ ನವೆಂಬರ್ 4ರಂದು ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ಆಸ್ಪತ್ರೆಗಳಿಗೆ ರೋಗಿಗಳು ಯಾವುದೇ ದಾಖಲೆ ಇಲ್ಲದೆ ಹೋದರೂ ಸಹ ತುರ್ತು ಚಿಕಿತ್ಸೆ ನೀಡಬೇಕು ಇಲ್ಲವಾದಲ್ಲಿ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. 

100%


Stay up to date on all the latest ರಾಜ್ಯ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp