ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ: ಹೆತ್ತ ಮಗಳನ್ನು ಕಾಲುವೆಗೆ ತಳ್ಳಿ ನಂತರ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದ ತಂದೆ!

ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ನಡೆದಿದೆ.
ಆರೋಪಿ ಓಂಕಾರಗೌಡ
ಆರೋಪಿ ಓಂಕಾರಗೌಡ

ಬಳ್ಳಾರಿ: ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದ ಮಗಳನ್ನು ತಂದೆಯೇ ಮರ್ಯಾದಾ ಹತ್ಯೆ ಮಾಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಕುಡಿತಿನಿ ಪಟ್ಟಣದಲ್ಲಿ ನಡೆದಿದೆ. 

ಕುಡುತಿನಿ ಪಟ್ಟಣದ ಬುಡ್ಗ ಜಂಗಮ ಕಾಲೋನಿಯಲ್ಲಿ ವಾಸವಾಗಿದ್ದ ಓಂಕಾರಗೌಡ ತಮ್ಮ ಪುತ್ರಿಯನ್ನು ಹೆಚ್ಎಲ್ ಸಿ ಕಾಲುವೆಗೆ ತಲ್ಲಿ ಕೊಲೆ ಮಾಡಿದ್ದಾರೆ. ಹೈಸ್ಕೂಲ್ ನಲ್ಲಿ ಓಂಕಾರಗೌಡನ ಮಗಳು ವ್ಯಾಸಾಂಗ ಮಾಡುತ್ತಿದ್ದಳು. ಇನ್ನು ಅನ್ಯಕೋಮಿನ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದ ಮೇಲೆ ಯುವಕನಿಂದ ದೂರವಿರುವಂತೆ ಓಂಕಾರಗೌಡ ಎಚ್ಚರಿಕೆ ನೀಡಿದ್ದರು. 

ಇದನ್ನು ದಿಕ್ಕರಿಸಿ ಯುವಕನ ಜೊತೆ ಪ್ರೀತಿಯ ಒಡನಾಟ ಮುಂದುವರಿಸಿದ್ದಾಳೆ ಎಂದು ಓಂಕಾರಗೌಡ ಮಗಳನ್ನು ಹತ್ಯೆ ಮಾಡಲು ನಿರ್ಧರಿಸಿದ್ದನು. ಅದರಂತೆ ಮಗಳನ್ನು ಅಕ್ಟೋಬರ್ 31ರಂದು ಮಧ್ಯಾಹ್ನ ಮಗಳನ್ನು ಸಿನಿಮಾ ತೋರಿಸುವುದಾಗಿ ಕರೆದುಕೊಂಡು ಹೋಗಿದ್ದಾನೆ. ಅಷ್ಟರಲ್ಲಾಗಲೇ ಸಿನಿಮಾ ಆರಂಭವಾಗಿದ್ದರಿಂದ ಪಟ್ಟಣದಲ್ಲಿ ಸುತ್ತಾಡಿದ್ದನು.

ರಾತ್ರಿಯಾದ ನಂತರ ಮಗಳನ್ನು ಕರೆದುಕೊಂಡು ಎಚ್ಎಲ್ ಸಿ ಕಾಲುವೆ ಬಳಿ ಬಂದಿದ್ದಾನೆ. ಇಲ್ಲೇ ಇರು ಬರುತ್ತೀನಿ ಎಂದು ಹೇಳಿ ಹೋದ ಓಂಕಾರಗೌಡ ನಂತರ ಹಿಂದಿನಿಂದ ಬಂದು ಮಗಳನ್ನು ಕಾಲುವೆಗೆ ತಳ್ಳಿದ್ದಾನೆ. ನೀರಿನ ರಭಸಕ್ಕೆ ಮಗಳು ಕೊಚ್ಚಿಹೋಗಿದ್ದಳು. 

ಅಲ್ಲಿಂದ ಮನೆಗೆ ಬಂದ ಓಂಕಾರಗೌಡ ಬೈಕ್ ಅನ್ನು ಮನೆಯಲ್ಲಿ ಬಿಟ್ಟು ತಿರುಪತಿಗೆ ಹೋಗಿದ್ದಾನೆ. ತಿಮ್ಮಪ್ಪನ ದರ್ಶನ ಪಡೆದು ವಾಪಸ್ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com