ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

ನವೆಂಬರ್ 1 ರಂದು ಜೆಡಿಎಸ್ ನಿಂದ 'ಬಾರಿಸು ಕನ್ನಡ ಡಿಂಡಿಮವ, ಹಾರಿಸು ಕನ್ನಡ ಬಾವುಟ' ಅಭಿಯಾನ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1 ರಂದು ಜೆಡಿಎಸ್ ನಿಂದ ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟ'ಅಭಿಯಾನವನ್ನು ಆಯೋಜಿಸಲಾಗಿದೆ.

ಬೆಂಗಳೂರು: ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1 ರಂದು ಜೆಡಿಎಸ್ ನಿಂದ ಬಾರಿಸು ಕನ್ನಡ ಡಿಂಡಿಮವ ಹಾರಿಸು ಕನ್ನಡ ಬಾವುಟ'ಅಭಿಯಾನವನ್ನು ಆಯೋಜಿಸಲಾಗಿದೆ.

ಅಂದು ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದರ ಮೂಲಕ ಈ  ಅಭಿಯಾನಕ್ಕೆ ಸಹಕರಿಸಬೇಕಾಗಿ ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನಾಡಿನ ಜನತೆಯಲ್ಲಿ ಮನವಿ ಮಾಡಿದ್ದಾರೆ.

ತಮಿಳು, ತೆಲುಗು, ಮಲಯಾಳಿಗಳಿಗೆ ತಮ್ಮ ಭಾಷೆಯ ಮೇಲಿರುವ ಅಭಿಮಾನದಂತೆ ಕನ್ನಡದ ಅಭಿಮಾನವನ್ನು ಎದ್ದು ತೋರಿಸುವ ಕಾಲ ಬಂದಿದ್ದು, ನವೆಂಬರ್ 1 ರಂದು ನಾಡಿನ ಮನೆ ಮನೆಗಳ ಮೇಲೂ ಕನ್ನಡ ಬಾವುಟ ಹಾರಿಸುವ ಮೂಲಕ ಸೂಪಿ ಸಂತರ ನಾಡಿನ ಅಭಿಮಾನವನ್ನು ಪ್ರದರ್ಶಿಸಬೇಕಾಗಿದೆ ಎಂದು ಅವರು ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com