ದೀಪಾವಳಿ ಹೊತ್ತಲ್ಲಿ ಬದುಕಿನಲ್ಲಿ ಕತ್ತಲೆ: ಸಾವು-ಬದುಕಿನ ನಡುವೆ ಕಲಬುರಗಿಯ ಸರ್ಕಲ್ ಇನ್ಸ್ ಪೆಕ್ಟರ್ ಹೋರಾಟ

ವಿವಿಧ ಬಣ್ಣಗಳಲ್ಲಿ ರಂಗೋಲಿ ಬಿಡಿಸಿ, ದೀಪಾಲಂಕಾರ ಮಾಡಿ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿನ ಇಲ್ಲಾಳ ನಿವಾಸ ಈ ವರ್ಷ ಇಡೀ ಜಗತ್ತೇ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಕತ್ತಲು ಕವಿದಿದೆ. ಸೆಪ್ಟೆಂಬರ್ 24 ರಿಂದ ಈ ಮನೆಯ ಬಾಗಿಲು ಮುಚ್ಚಿದೆ. 
ಬಲಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ
ಬಲಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮಂತ ಇಲ್ಲಾಳ

ಕಲಬುರಗಿ: ವಿವಿಧ ಬಣ್ಣಗಳಲ್ಲಿ ರಂಗೋಲಿ ಬಿಡಿಸಿ, ದೀಪಾಲಂಕಾರ ಮಾಡಿ ಸಂಭ್ರಮದಿಂದ ಕಂಗೊಳಿಸುತ್ತಿದ್ದ ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿನ ಇಲ್ಲಾಳ ನಿವಾಸ ಈ ವರ್ಷ ಇಡೀ ಜಗತ್ತೇ ಬೆಳಕಿನ ಹಬ್ಬವನ್ನು ಆಚರಿಸುತ್ತಿರುವ ಹೊತ್ತಿನಲ್ಲಿ ಕತ್ತಲು ಕವಿದಿದೆ. ಸೆಪ್ಟೆಂಬರ್ 24 ರಿಂದ ಈ ಮನೆಯ ಬಾಗಿಲು ಮುಚ್ಚಿದೆ. 

ಮನೆಯ ಮುಖ್ಯಸ್ಥ ಶ್ರೀಮಂತ ಇಲ್ಲಾಳ, ಕಲಬುರಗಿಯ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಕೋಮಾದಲ್ಲಿ ಮಲಗಿದ್ದಾರೆ. ಅವರ ಪತ್ನಿ, ಮಗಳು ಮತ್ತು ಮಗ ದೀಪಾವಳಿ ಹೊತ್ತಿನ ಸಮಯದಲ್ಲಿ ಶ್ರೀಮಂತ ಬಲ್ಲಾಳರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. 

ನಡೆದ ಘಟನೆಯೇನು?: ಸೆಪ್ಟೆಂಬರ್ 23 ರ ರಾತ್ರಿ ಕಲಬುರಗಿ ಜಿಲ್ಲೆಯ ಮಹಾಗಾಂವ ಪೊಲೀಸ್ ಠಾಣೆಯ ಶ್ರೀಮಂತ ಇಲ್ಲಾಳ ಮತ್ತು ಪೊಲೀಸ್ ಸಿಬ್ಬಂದಿಯ ಚಿಕ್ಕ ತಂಡ ಮಹಾರಾಷ್ಟ್ರದ ಉಮರ್ಗಾ ತಾಲೂಕಿನ ತೋರ್ಲಿ ವಾಡಿಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಗ್ಯಾಂಗ್ ನ್ನು ಬಂಧಿಸಲು ಹೊರಟಿತ್ತು.

ರಾತ್ರಿ 10.30 ರ ಸುಮಾರಿಗೆ, 8-10 ಸಿಬ್ಬಂದಿಗಳ ತಂಡವು ಪ್ರದೇಶದ ಬಗ್ಗೆ ಚೆನ್ನಾಗಿ ತಿಳಿದಿರುವ 40 ಕ್ಕೂ ಹೆಚ್ಚು ಜನರ ತಂಡದಿಂದ ದಾಳಿ ಮಾಡಿದೆ. ಬೀದರ್ ಜಿಲ್ಲೆಯ ಮಂಠಾಳ ಪೊಲೀಸ್ ವ್ಯಾಪ್ತಿಗೆ ಬರುವ ಹೊನ್ನಾಳಿಯಲ್ಲಿ ಇಲ್ಲಾಳನ್ನು ಬೆನ್ನಟ್ಟಿದ ವ್ಯಕ್ತಿಗಳು ಕೋಲುಗಳಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇಲ್ಲಾ ಪ್ರಜ್ಞೆ ತಪ್ಪಿದ ನಂತರ ಅವರು ಹೊರಟುಹೋದರು.

ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಇನ್ಸ್‌ಪೆಕ್ಟರ್‌ ಪ್ರಜ್ಞೆ ತಪ್ಪಿ ಬಿದ್ದಿರುವುದನ್ನು ಪತ್ತೆ ಮಾಡಿ ಕಲಬುರಗಿ ಆಸ್ಪತ್ರೆಗೆ ಕರೆತಂದರು. ಹೆಚ್ಚಿನ ಚಿಕಿತ್ಸೆಗಾಗಿ ಎರಡು ದಿನಗಳ ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ವಿಮಾನದಲ್ಲಿ ಸಾಗಿಸಲಾಯಿತು. 

ಅವರ ಪುತ್ರ 25 ವರ್ಷದ ಕಿರಣ್ ಇಲ್ಲಾಳ, ಅಂದು ರಾತ್ರಿ ತಂದೆ ಕೊನೆಯದಾಗಿ ಮಾತನಾಡಿದ್ದರು. ಮರುದಿನ ಬೆಳಿಗ್ಗೆ ಹಿಂತಿರುಗುವುದಾಗಿ ಹೇಳಿ ಹೋಗಿದ್ದರು. ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲು ನಮ್ಮ ತಂದೆ ಇಷ್ಟಪಡುತ್ತಾರೆ, ಇಂದು ನಮ್ಮ ಮನೆಯಲ್ಲಿ ಕತ್ತಲು ಕವಿದಿದೆ ಎಂದು ದುಃಖದಿಂದ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com