ಶಿವಮೊಗ್ಗ ಮಹಾನಗರ ಪಾಲಿಕೆಯಿಂದ 543 ಆಶ್ರಯ ನಿವೇಶನ ರದ್ದು

1997ರಲ್ಲಿ ಹಂಚಿಕೆಯಾಗಿ ಎರಡು ದಶಕಗಳು ಕಳೆದರೂ ನಿವೇಶನ ಪಡೆದವರು ಮನೆ ನಿರ್ಮಿಸಿಕೊಳ್ಳದ ಕಾರಣ ಬೊಮ್ಮನಕಟ್ಟೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿದ್ದ 543 ಖಾಲಿ ನಿವೇಶನಗಳನ್ನು ಶಿವಮೊಗ್ಗ ನಗರ ಪಾಲಿಕೆ...
ಶಿವಮೊಗ್ಗ ಮಹಾನಗರ ಪಾಲಿಕೆ
ಶಿವಮೊಗ್ಗ ಮಹಾನಗರ ಪಾಲಿಕೆ

ಶಿವಮೊಗ್ಗ: 1997ರಲ್ಲಿ ಹಂಚಿಕೆಯಾಗಿ ಎರಡು ದಶಕಗಳು ಕಳೆದರೂ ನಿವೇಶನ ಪಡೆದವರು ಮನೆ ನಿರ್ಮಿಸಿಕೊಳ್ಳದ ಕಾರಣ ಬೊಮ್ಮನಕಟ್ಟೆಯಲ್ಲಿ ವಿವಿಧ ವಸತಿ ಯೋಜನೆಗಳಡಿ ಮಂಜೂರಾಗಿದ್ದ 543 ಖಾಲಿ ನಿವೇಶನಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ರದ್ದುಗೊಳಿಸಿದೆ.

ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ವಸತಿ ಯೋಜನೆಗಳ ಅಡಿಯಲ್ಲಿ ಸಿಟಿ ಕಾರ್ಪೊರೇಶನ್‌ನಿಂದ ಈ ನಿವೇಶನಗಳನ್ನು ನೀಡಲಾಗಿತ್ತು. ಎರಡು ದಶಕಗಳಿಂದ ಅರ್ಹ ಫಲಾನುಭವಿಗಳಿಗೆ ಒಟ್ಟು 6,000 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು ಎಂದು ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

“ಹಲವು ಫಲಾನುಭವಿಗಳು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ ಇನ್ನೂ ಹಲವು ನಿವೇಶನಗಗಳು ಖಾಲಿ ಇದ್ದವು. ಅವರಿಗೆ ಮನೆ ನಿರ್ಮಿಸಿಕೊಳ್ಳದಿದ್ದರೆ ನಿವೇಶನಗಳನ್ನು ರದ್ದುಗೊಳಿಸುವ ಎಚ್ಚರಿಕೆ ನೀಡಿದ ನಂತರ ಕೆಲವು ಫಲಾನುಭವಿಗಳು ಮನೆ ನಿರ್ಮಿಸಲು ಮುಂದೆ ಬಂದಿದ್ದಾರೆ. ಆದರೆ, 543 ನಿವೇಶನಗಳ ಮಾಲೀಕರು ಇನ್ನೂ ಮನೆಗಳನ್ನು ನಿರ್ಮಿಸಿಲ್ಲ.  ಅವರಲ್ಲಿ ಹಲವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇನ್ನು ಕೆಲವರು ಎಲ್ಲಿದ್ದಾರೆ ಎಂಬುದು ಪತ್ತೆಯಾಗದ ಕಾರಣ ಅವರ ನಿವೇಶನ ರದ್ದುಗೊಳಿಸಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ಹಲವು ಫಲಾನುಭವಿಗಳು ಮನೆಗಳನ್ನು ನಿರ್ಮಿಸುವಲ್ಲಿ ವಿಫಲರಾದ ಕಾರಣ ಸ್ಥಳ ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ಪ್ರಕಾರ ಎ ಬ್ಲಾಕ್‌ನಲ್ಲಿ 44, ಬಿ ಬ್ಲಾಕ್‌ನಲ್ಲಿ 78, ಸಿ ಬ್ಲಾಕ್‌ನಲ್ಲಿ 97, ಡಿ ಬ್ಲಾಕ್‌ನಲ್ಲಿ 78, ಇ ಬ್ಲಾಕ್‌ನಲ್ಲಿ 51, ಎಫ್ ಬ್ಲಾಕ್‌ನಲ್ಲಿ 107 ಮತ್ತು ಜಿ ಬ್ಲಾಕ್‌ನಲ್ಲಿ 88 ನಿವೇಶನ ಸೇರಿದಂತೆ 543 ನಿವೇಶನ ರದ್ದುಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಿವೇಶನ ಹಂಚಿಕೆದಾರರು ಎರಡು ದಶಕ ಕಳೆದರೂ ಮನೆಗಳನ್ನು ನಿರ್ಮಿಸಿಲ್ಲ. ಇದು ಹಕ್ಕುಪತ್ರದ ಷರತ್ತುಗಳ ಉಲ್ಲಂಘನೆಯಾಗಿದೆ ಎಂದು ಆಯುಕ್ತರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com