social_icon

ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಸಾವು ಪ್ರಕರಣ: ಕುಟುಂಬಸ್ಥರಿಂದ ಸಿಎಂ ಭೇಟಿ, ಮೃತದೇಹ ತರಲು ಮನವಿ

ದಾವಣಗೆರೆ ಜಿಲ್ಲೆಯ ಅನಿವಾಸಿ ಭಾರತೀಯ ಕುಟುಂಬದ ಮೂವರು ಅಮೆರಿಕದ ಮೇರಿಲ್ಯಾಂಡ್ ನ ಬಾಲ್ಟಿಮೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Published: 21st August 2023 03:59 PM  |   Last Updated: 21st August 2023 04:42 PM   |  A+A-


CM_Siddaramaia_with_famlies_of_Us_Tecchi

ಅಮೆರಿಕದಲ್ಲಿ ಮೃತಪಟ್ಟ ಟೆಕ್ಕಿ ದಂಪತಿ ಪೋಷಕರು, ಸಿಎಂ ಸಿದ್ದರಾಮಯ್ಯ

Posted By : Nagaraja AB
Source : The New Indian Express

ಬೆಂಗಳೂರು: ದಾವಣಗೆರೆ ಜಿಲ್ಲೆಯ ಅನಿವಾಸಿ ಭಾರತೀಯ ಕುಟುಂಬದ ಮೂವರು ಅಮೆರಿಕದ ಮೇರಿಲ್ಯಾಂಡ್ ನ ಬಾಲ್ಟಿಮೋರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಕುಟುಂಬದ ಸಂಬಂಧಿಕರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮೃತ ದೇಹಗಳನ್ನು ದಾವಣಗೆರೆಗೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದರು.

ಅಗತ್ಯ ನೆರವು ನೀಡುವಂತೆ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರಿಗೆ ಮುಖ್ಯಮಂತ್ರಿ ಸೂಚಿಸಿದರು. ಕೆಲ ದಿನಗಳ ಹಿಂದೆ ಅಮೆರಿಕದ ಬಾಲ್ಟಿಮೋರ್‌ನಲ್ಲಿ 3 ಮಂದಿ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ವರದಿಯಾಗಿತ್ತು. ಮೃತರನ್ನು 37 ವರ್ಷದ ಟೆಕ್ಕಿ ಯೋಗೇಶ್ ಎಚ್ ನಾಗರಾಜಪ್ಪ, ಅವರ ಪತ್ನಿ 37 ವರ್ಷದ ಪ್ರತಿಬಾ ವೈ ಅಮರನಾಥ್ ಮತ್ತು ಅವರ 6 ವರ್ಷದ ಮಗ ಯಶ್ ಹೊನ್ನಾಳ್ ಎಂದು ಗುರುತಿಸಲಾಗಿದೆ.

ದಿ ಬಾಲ್ಟಿಮೋರ್ ಸನ್ ಪ್ರಕಾರ  ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈ ಘಟನೆಯು ಶಂಕಿತ ಯೋಗೇಶ್ ಎಚ್ ನಾಗರಾಜಪ್ಪ ಜೋಡಿ ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ ಎಂದು ಬಾಲ್ಟಿಮೋರ್ ಕೌಂಟಿ ಪೊಲೀಸ್ ವಕ್ತಾರ ಆಂಥೋನಿ ಶೆಲ್ಟನ್ ಶನಿವಾರ ಬೆಳಿಗ್ಗೆ ಹೇಳಿದ್ದಾರೆ. ಪ್ರತಿಯೊಬ್ಬರೂ ಸ್ಪಷ್ಟವಾಗಿ ಗುಂಡೇಟಿನಿಂದ ಬಳಲಿರುವಂತೆ ಕಂಡುಬಂದಿದೆ ಎಂದು ಶೆಲ್ಟನ್ ಹೇಳಿದರು. ಈ ಘಟನೆ ಕುರಿತು ತನಿಖೆ ಮುಂದುವರೆದಿದ್ದು, ನಂತರ ಹೆಚ್ಚಿನ ಮಾಹಿತಿ ತಿಳಿದುಬರಲಿದೆ ಎಂದು ಪೊಲೀಸರು ಹೇಳಿರುವುದಾಗಿ ಬಾಲ್ಟಿಮೋರ್ ಸನ್ ತಿಳಿಸಿದೆ.  ಇದು  ಮೇರಿಲ್ಯಾಂಡ್‌ನಲ್ಲಿ ಅತ್ಯಧಿಕ ಪ್ರಸರಣ ಹೊಂದಿರುವ ದಿನಪತ್ರಿಕೆಯಾಗಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ದಾವಣಗೆರೆಯ ದಂಪತಿ ಪ್ರಕರಣ: ಜೋಡಿ ಕೊಲೆ-ಆತ್ಮಹತ್ಯೆ ಶಂಕೆ

ಈ ಮಧ್ಯೆ ದಂಪತಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಒಂದು ವಾರದ ಹಿಂದೆ ದಂಪತಿಯೊಂದಿಗೆ ಮಾತನಾಡಿದ್ದು ಎಲ್ಲವೂ ಸರಿಯಾಗಿದೆ ಎಂದು ಯೋಗೇಶ್ ಹೇಳಿದ್ದಾಗಿ ಪೋಷಕರು ಹೇಳಿದ್ದಾರೆ. ನಾವು ನೋಡಿದಂತೆ ಅವರಿಗೆ ಯಾವುದೇ ಸಮಸ್ಯೆ ಇರಲಿಲ್ಲ. ಅವರು 9 ವರ್ಷಗಳ ಹಿಂದೆ ವಿವಾಹವಾದರು, ಅವರು ಅಮೆರಿಕದಲ್ಲಿದ್ದರು, ಅವರ ಪತ್ನಿ ಬೆಂಗಳೂರಿನವರು, ನಮ್ಮ ಎರಡನೇ ಮಗನಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ, ಸಾವಿನ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಅಥವಾ ಏನಾಯಿತು, ಮೃತದೇಹಗಳನ್ನು ಮರಳಿ ತರಲು ನಮಗೆ ಸಹಾಯ ಮಾಡುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತಿರುವುದಾಗಿ ಅವರು ತಿಳಿಸಿದರು. 

ಯೋಗೇಶ್  ಮೊದಲು ಜರ್ಮನಿಯಲ್ಲಿದ್ದ, ನಂತರ ಆತ ಮದುವೆಯಾಗಿ ಯುಎಸ್‌ನಲ್ಲಿ ದಂಪತಿ ನೆಲೆಸಿದ್ದರು, ಅವರು ಭಾರತಕ್ಕೆ ಬಂದಾಗ ನಾವು ತೆಗೆದ ಈ ಫೋಟೋಗಳು ನಮ್ಮ ಬಳಿ ಇವೆ, ದೇಹವನ್ನು ಮರಳಿ ತರಬೇಕೆಂದು ನಮ್ಮ ಏಕೈಕ ಮನವಿಯಾಗಿದೆ. ಮೂರ್ನಾಲ್ಕು ದಿನ ಕಳೆದರೂ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ಪೋಷಕರು  ಹೇಳಿದರು. 


Stay up to date on all the latest ರಾಜ್ಯ news
Poll
N R narayana Murty

ಯಾವುದನ್ನೂ ಫ್ರೀಯಾಗಿ ಕೊಡಬಾರದು ಎಂದು ಎನ್ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.


Result
ಸರಿ
ತಪ್ಪು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp