social_icon

ಬೆಳಗಾವಿಯಿಂದ ವಿಮಾನ ಸೇವೆ ಸ್ಥಗಿತ: ರಾಜಕೀಯ ನಾಯಕರು, ಉದ್ಯಮಿಗಳಿಂದ ಆಕ್ರೋಶ

ಬೆಳಗಾವಿಯಿಂದ ದೇಶದ ವಿವಿಧ ನಗರಗಳಿಗೆ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು, ಈ ಬೆಳವಣಿಗೆಗೆ ರಾಜಕೀಯ ನಾಯಕರು ಹಾಗೂ ಉದ್ಯಮಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Published: 19th January 2023 11:52 AM  |   Last Updated: 19th January 2023 11:52 AM   |  A+A-


File photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಬೆಂಗಳೂರು: ಬೆಳಗಾವಿಯಿಂದ ದೇಶದ ವಿವಿಧ ನಗರಗಳಿಗೆ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆಗಳು ಸ್ಥಗಿತಗೊಂಡಿದ್ದು, ಈ ಬೆಳವಣಿಗೆಗೆ ರಾಜಕೀಯ ನಾಯಕರು ಹಾಗೂ ಉದ್ಯಮಗಳಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ವಿಧಾನಸಬಾ ಚುನಾವಣೆ ಹತ್ತಿರಬರುತ್ತಿದ್ದು, ರಾಜಕೀಯ ನಾಯಕರಿಗೆ ಬೆಂಗಳೂರು ಬಳಿಕ 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಕೂಡ ಅತ್ಯಂತ ಪ್ರಮುಖ ಜಿಲ್ಲೆಯಾಗಿದೆ. ಇದೀಗ ಬೆಳಗಾವಿಯಿಂದ ವಿಮಾನ ಸೇವೆ ಸ್ಥಗಿತಗೊಂಡಿರುವುದು ರಾಜಕೀಯ ನಾಯಕರಲ್ಲಿ ಬೇಸರವನ್ನುಂಟು ಮಾಡಿದೆ.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ಪ್ರಸ್ತುತದ ಬೆಳವಣಿಗೆಯು ಎಲ್ಲರಲ್ಲೂ ಕೋಪವನ್ನುಂಟು ಮಾಡಿದೆ. ಕೇಂದ್ರ ಸಚಿವರೊಬ್ಬರು ಹುಬ್ಬಳ್ಳಿ-ಧಾರವಾಡದ ವಿಚಾರದತ್ತ ಗಮನಹರಿಸಿದ್ದಾರೆ. ಆದರೆ, ಬೆಳಗಾವಿ ಸಮಸ್ಯೆ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಸಂಸದೆ ಮಂಗಳಾ ಅಂಗಡಿ ಪ್ರಯತ್ನ ನಡೆಸಿದರಾದರೂ ಅದು ಸಫಲವಾಗಲಿಲ್ಲ. ಗಡಿ ವಿವಾದದಿಂದ ನಿರ್ಲಕ್ಷಿಸಿರಬಹುದು ಎಂದು ಹೇಳಿದ್ದಾರೆ.

ಖಾನಾಪುರ, ಚಿಕ್ಕೋಡಿ, ಅಥಣಿ, ರಾಯಬಾಗ, ಗೋಕಾಕ್, ಹುಕ್ಕೇರಿ ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲು ರಾಜಕೀಯ ನಾಯಕರಿಗೆ ಪ್ರಮುಖ ಪ್ರದೇಶಗಳಿವೆ. ಹೀಗಾಗಿ ವಿಮಾನ ನಿಲ್ದಾಣ ನಿರ್ಣಾಯಕವಾಗಿದೆ. ಶಾಸಕರು, ಎಂಎಲ್‌ಸಿಗಳು, ಸಂಸದರು ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ನಿಯಮಿತವಾಗಿ ವಿಮಾನಗಳನ್ನು ಬಳಸುತ್ತಾರೆ. ಬೆಳಗಾವಿ ವಿಮಾನ ನಿಲ್ದಾಣವು ದಕ್ಷಿಣ ಕ್ಷೇತ್ರಗಳ ರಾಜಕಾರಣಿಗಳಿಗೆ ಸುಲಭವಾಗಿ ಸಂಪರ್ಕವನ್ನು ಒದಗಿಸುತ್ತದೆ, ಇಲ್ಲಿಂದ ಬೆಂಗಳೂರಿಗೆ ಸುಲಭವಾಗಿ ಹೋಗುತ್ತಾರೆ. ಬಳಿಕ ಆಯಾ ಸ್ಥಳಗಳಿಗೆ ರಸ್ತೆ ಮಾರ್ಗದಲ್ಲಿ ಚಲಿಸುತ್ತಾರೆ.

ರಾಜಕಾರಣಿಗಳಿಗಿಂತಲೂ ಉದ್ಯಮಿಗಳಿಗೆ ಪ್ರಸ್ತುತ ಬೆಳವಣಿಗೆ ಸಾಕಷ್ಟು ಅಸಮಾಧಾನವನ್ನುಂಟು ಮಾಡಿದೆ. ಅಭಿವೃದ್ಧಿಶೀಲ ಜಗತ್ತಿನಾದ್ಯಂತ ವಾಯು ಸಂಪರ್ಕವು ವಿಸ್ತರಿಸುತ್ತಿರುವಾಗ ಬೆಳಗಾವಿಯಲ್ಲಿನ ಪ್ರಸ್ತುತ ಬೆಳವಣಿಗೆ ಉದ್ಯಮಿಗಳಲ್ಲಿ ಬೇಸರವನ್ನು ಮೂಡಿಸಿದೆ.

“ಮೋದಿ ಸರ್ಕಾರವು ಉಡಾನ್ ಯೋಜನೆಯನ್ನು ಜಾರಿಗೆ ತರದೇ ಹೋಗಿದ್ದರೆ, ಬೆಳಗಾವಿ ಮತ್ತು ಹುಬ್ಬಳ್ಳಿ ಎರಡೂ ವಿಮಾನ ನಿಲ್ದಾಣಗಳು ಕೇವಲ ಶೋಪೀಸ್ ಆಗುತ್ತಿದ್ದವು. ಖಾಸಗಿ ಕಂಪನಿಗಳು ವಾಣಿಜ್ಯ ಹಿತಾಸಕ್ತಿಯೊಂದಿಗೆ ವಿಮಾನಗಳ ನಿರ್ವಣೆ ಮಾಡುವುರದಿಂದ ಕೆಲ ಏರಿಳಿತಗಳು ಎದುರಾಗುತ್ತವೆ. ಆದರೆ, ನಂತರ ದಿನಗಳಲ್ಲಿ ಸಮಸ್ಯೆಗಳು ದೂರಾಗುತ್ತದೆ ಎಂದು ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
K Annamalai

ಎನ್‌ಡಿಎಯಿಂದ ಹೊರಬರುವ ಎಐಎಡಿಎಂಕೆ ನಿರ್ಧಾರವು 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಪಕ್ಷದ ಸಾಧನೆ ಮೇಲೆ ಪರಿಣಾಮ ಬೀರಲಿದೆಯೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp