social_icon

ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಹುಲ್ಲಿನಿಂದ 'ಶಿವಲಿಂಗ'ದ ಕೆತ್ತನೆಗೆ ವಿದ್ಯಾರ್ಥಿಗಳ ಆಕ್ಷೇಪ!

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಶಿವಲಿಂಗ, ನಂದಿ, ನಾಗರಹಾವಿನ ಆಕಾರದ ಹುಲ್ಲಿನ ಕಲೆಗಳು ತಲೆ ಎತ್ತುತ್ತಿವೆ. ಉದ್ಯಾನದಲ್ಲಿ ಹುಲ್ಲಿನಿಂದ ಕೆತ್ತಿದ ಧಾರ್ಮಿಕ ಚಿಹ್ನೆಗಳ ವಿರುದ್ಧ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸುತ್ತಿದೆ.

Published: 21st January 2023 01:50 PM  |   Last Updated: 21st January 2023 02:37 PM   |  A+A-


A shrub art depicting a Shivalinga near the administrative building of Karnatak University in Dharwad

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ಕಾಣುತ್ತಿರುವ ಹುಲಿನ ಕೆತ್ತನೆಯ ಶಿವಲಿಂಗ

Posted By : Ramyashree GN
Source : Express News Service

ಹುಬ್ಬಳ್ಳಿ: ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಶಿವಲಿಂಗ, ನಂದಿ, ನಾಗರಹಾವಿನ ಆಕಾರದ ಹುಲ್ಲಿನ ಕಲೆಗಳು ತಲೆ ಎತ್ತುತ್ತಿವೆ. ಉದ್ಯಾನದಲ್ಲಿ ಹುಲ್ಲಿನಿಂದ ಕೆತ್ತಿದ ಧಾರ್ಮಿಕ ಚಿಹ್ನೆಗಳ ವಿರುದ್ಧ ವಿದ್ಯಾರ್ಥಿಗಳ ಒಂದು ವಿಭಾಗ ವಿರೋಧ ವ್ಯಕ್ತಪಡಿಸುತ್ತಿದೆ. ಒಂದು ವೇಳೆ ವಿಶ್ವವಿದ್ಯಾನಿಲಯವು ಇವುಗಳನ್ನು ಉಳಿಸಿಕೊಳ್ಳಲು ಬಯಸಿದರೆ, ಇತರ ಧರ್ಮಗಳ ಚಿಹ್ನೆಗಳನ್ನು ಕೆತ್ತಲಿ ಎನ್ನುತ್ತಿದ್ದಾರೆ.

ಕೆಯುಡಿ ಮುಖ್ಯ ಆಡಳಿತ ಕಟ್ಟಡದ ಮುಂಭಾಗದಲ್ಲಿರುವ ಉದ್ಯಾನ ಪ್ರದೇಶದಲ್ಲಿ ಕಲಾಕೃತಿಗಳು ಮೂಡಿಬಂದಿವೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ಕೆಯುಡಿ ಶಿಕ್ಷಣ ಸಂಸ್ಥೆಯಾಗಿದ್ದು, ಕ್ಯಾಂಪಸ್‌ನಲ್ಲಿ ಧಾರ್ಮಿಕ ಚಿಹ್ನೆಗಳನ್ನು ಪ್ರದರ್ಶಿಸಲು ಅವಕಾಶವಿಲ್ಲ ಎಂದು ಹೇಳಿದರು.

ಇತ್ತೀಚಿಗೆ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಂದಿರ ನಿರ್ಮಿಸಲು ಮುಂದಾದಾಗ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿಶ್ವವಿದ್ಯಾನಿಲಯಗಳನ್ನು ಧಾರ್ಮಿಕ ಸಮಸ್ಯೆಗಳಿಂದ ಮುಕ್ತವಾಗಿಡುವುದು ಒಳ್ಳೆಯದು. ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಧಾರ್ಮಿಕ ಚಿಹ್ನೆಗಳನ್ನು ತೋರಿಸುವುದು ಏಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

'ಕೆಯುಡಿಯು ಈ ಯೋಜನೆಯೊಂದಿಗೆ ಮುಂದುವರಿಯಲು ಬಯಸಿದರೆ, ಅವರು ಇತರೆ ಎಲ್ಲಾ ಸಮುದಾಯಗಳ ಧರ್ಮದ ಸಂಕೇತಗಳನ್ನು ಕೆತ್ತಬೇಕು. ಏಕೆಂದರೆ, ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಎಲ್ಲಾ ವರ್ಗಗಳಿಂದ ಬಂದವರು ಮತ್ತು ವಿವಿಧ ಧರ್ಮಗಳಿಗೆ ಸೇರಿದವರು ಎಂದು ಕೆಯುಡಿಯ ಹಿರಿಯ ವಿದ್ಯಾರ್ಥಿಯೊಬ್ಬರು ಹೇಳಿದರು.

ಕೆಲ ವಾರಗಳ ಹಿಂದೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದನ್ನು ವಿರೋಧಿಸುವ ವಿದ್ಯಾರ್ಥಿಗಳು ಎಲ್ಲದರಲ್ಲೂ ಧರ್ಮವನ್ನು ನೋಡುತ್ತಿದ್ದಾರೆ. ವಿಶ್ವವಿದ್ಯಾನಿಲಯ ಪ್ರವೇಶದ್ವಾರದಲ್ಲಿ ಜ್ಞಾನದ ದೇವಾಲಯವನ್ನು ಪ್ರವೇಶಿಸುವ ಮುನ್ನ ಕೈಮುಗಿಯಬೇಕು ಎಂದೇಳುತ್ತದೆ. ಆಗಲೂ ನೀವು ಇದನ್ನು ಇನ್ನೊಂದು ರೀತಿಯಲ್ಲಿ ಅರ್ಥೈಸಬಹುದು. ಆದ್ದರಿಂದ ಎಲ್ಲವನ್ನು ವಿರೋಧಿಸುವ ಇಂತಹ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ವಿದ್ಯಾರ್ಥಿಗಳಲ್ಲಿ ವಿನಂತಿಸುತ್ತೇನೆ.

ವಾಸ್ತವವಾಗಿ, ಧಾರ್ಮಿಕ ಚಿಹ್ನೆಗಳ ಆಕಾರಗಳನ್ನು ಮಾಡಲು ತೋಟಗಾರಿಕೆ ಸಿಬ್ಬಂದಿಗೆ ಯಾವುದೇ ಆದೇಶಗಳನ್ನು ನೀಡಲಾಗಿಲ್ಲ. ತೋಟಗಾರಿಕೆ ತಂಡದವರು ಈ ಕೆಲಸ ಮಾಡುತ್ತಾರೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಅಧಿಕಾರಿಯೊಬ್ಬರು ಹೇಳಿದ್ದಾರೆ.


Stay up to date on all the latest ರಾಜ್ಯ news
Poll
New parliament building

ಹೊಸ ಸಂಸತ್ ಕಟ್ಟಡದ ಉದ್ಘಾಟನೆಯನ್ನು ಬಹಿಷ್ಕರಿಸುವ ಹಲವಾರು ವಿರೋಧ ಪಕ್ಷಗಳ ನಿರ್ಧಾರವು ಸಮರ್ಥನೀಯವೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp