ಸದ್ದಿಲ್ಲದೆ ಜೀರೋ ಟ್ರಾಫಿಕ್‌ನಲ್ಲಿ ಓಡಾಡುತ್ತಿರುವ ಸಿಎಂ ಸಿದ್ದರಾಮಯ್ಯ: ಬಿಜೆಪಿ ಲೇವಡಿ

ಜೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಈಗ ಮತ್ತೆ ಸದ್ದಿಲ್ಲದೆ ಜೀರೋ ಟ್ರಾಫಿಕ್ ನಲ್ಲಿ ಓಡಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಜೀರೋ ಟ್ರಾಫಿಕ್ ಬೇಡ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಈಗ ಮತ್ತೆ ಸದ್ದಿಲ್ಲದೆ ಜೀರೋ ಟ್ರಾಫಿಕ್ ನಲ್ಲಿ ಓಡಾಡುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಇದು ರಿವರ್ಸ್ ಗೇರ್ ಕಾಂಗ್ರೆಸ್ ಎಂದು ಅಂದೇ ಹೇಳಿದ್ದೇವು. ಈಗ ಅದು ಪ್ರತ್ಯಕ್ಷವಾಗಿ ಸಾಬೀತಾಗುತ್ತಿದೆ ಎನ್ನುವುದು ರಾಜ್ಯದ ಪಾಲಿಗೆ ಖೇದಕರ ಎಂದು ಟೀಕಿಸಿದೆ. ಜೀರೋ ಟ್ರಾಫಿಕ್ ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದು ಸುದ್ದಿಯಾಗೋದಕ್ಕೆ ಮಾತ್ರ.  ಈಗ ಸದ್ದಿಲ್ಲದೇ ಮತ್ತೆ ಜೀರೋ ಟ್ರಾಫಿಕ್ ನಲ್ಲಿ ಓಡಾಡುತ್ತಿದ್ದಾರೆ ಎಂದು ಕಿಡಿಕಾರಿದೆ. 

ಮೇ 20 ರಂದು ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ, ತಮಗಿದ್ದ ಜೀರೋ ಟ್ರಾಫಿಕ್ ಸೌಲಭ್ಯ ತ್ಯಜಿಸಿರುವುದಾಗಿ ಟ್ವೀಟ್ ಮಾಡಿದ್ದರು. ಆದರೆ ಶನಿವಾರ ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಿಂದ ಲಾಲ್ ಬಾಗ್ ವೆಸ್ಟ್ ಗೇಟ್ ಗೆ ಪ್ರಯಾಣಿಸುವ ವೇಳೆ ಸಿದ್ದರಾಮಯ್ಯ ಅವರಿಗೆ ಪೊಲೀಸರು ಜೀರೋ ಟ್ರಾಫಿಕ್ ಸೌಲಭ್ಯ ಕಲ್ಪಿಸಿದ್ದಾರೆ. ಇದು ಬಿಜೆಪಿ ಟೀಕೆಗೆ ಕಾರಣವಾಗಿದೆ. 

200 ಯುನಿಟ್‌ ಉಚಿತ ವಿದ್ಯುತ್‌ ಯೋಜನೆ ಅದೆಂಥಾ ದೋಖಾ ಎಂದು ದಿನಹೋದಂತೆ ಸಾಬೀತಾಗುತ್ತಿದೆ. 200 ಯುನಿಟ್‌ ಫ್ರೀ ಅಂದಿಲ್ಲವೆಂದು ಇಂಧನ ಸಚಿವರೇ ರಿವರ್ಸ್‌ ಕನೆಕ್ಷನ್‌ ಕೊಡುತ್ತಿದ್ದಾರೆ. ಜನ, ಕೈಗಾರಿಕೆ ಮತ್ತು ಉದ್ಯೋಗ ಸೃಷ್ಟಿಗೆ ಶಾಕ್‌ ಮಾತ್ರವಲ್ಲ ಶಾರ್ಟ್‌ ಸರ್ಕ್ಯೂಟ್‌ನ ಅನುಭವ ಕೊಡಲು ಕೆಜೆ ಜಾರ್ಜ್ ಸನ್ನದ್ಧರಾಗಿದ್ದಾರೆ ಎಂದು ಬಿಜೆಪಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com