ಟಿಬಿ ಮುಕ್ತ ಭಾರತ ಉಪಕ್ರಮದಡಿಯಲ್ಲಿ 100 ಕ್ಷಯ ರೋಗಿಗಳ ದತ್ತು ಪಡೆದ ರಾಜ್ಯಪಾಲ ಗೆಹ್ಲೋಟ್

ಕೇಂದ್ರ ಸರ್ಕಾರದ ಟಿಬಿ ಮುಕ್ತ ಭಾರತ ಉಪಕ್ರಮದಡಿಯಲ್ಲಿ ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳ ದತ್ತು ಪಡೆದಿದ್ದಾರೆ.
ಕ್ಷಯ ರೋಗಿಗಳ ದತ್ತು ಪಡೆದ ರಾಜ್ಯಪಾಲ ಗೆಹ್ಲೋಟ್
ಕ್ಷಯ ರೋಗಿಗಳ ದತ್ತು ಪಡೆದ ರಾಜ್ಯಪಾಲ ಗೆಹ್ಲೋಟ್

ಬೆಂಗಳೂರು: ಕೇಂದ್ರ ಸರ್ಕಾರದ ಟಿಬಿ ಮುಕ್ತ ಭಾರತ ಉಪಕ್ರಮದಡಿಯಲ್ಲಿ ಕರ್ನಾಟಕ ರಾಜ್ಯಪಾಲರಾದ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳ ದತ್ತು ಪಡೆದಿದ್ದಾರೆ.

ಸೋಮವಾರ ಇಲ್ಲಿನ ರಾಜಭವನದಲ್ಲಿ ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದ 'ನಿ-ಕ್ಷಯ ಮಿತ್ರ'ದ ಅಂಗವಾಗಿ ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಲ್ಹೋಟ್ ಅವರು 100 ಕ್ಷಯ ರೋಗಿಗಳನ್ನು ದತ್ತು ಪಡೆದರು. ಈ ವೇಳೆ ಮಾತನಾಡಿದ ಅವರು, 'ಜನರು, ಕಾರ್ಪೊರೇಟ್ ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಟಿಬಿ ರೋಗಿಗಳನ್ನು ದತ್ತು ತೆಗೆದುಕೊಳ್ಳಬೇಕು ಮತ್ತು ಟಿಬಿ ಮುಕ್ತ ಭಾರತವನ್ನು ಸಾಧಿಸಲು ಕೊಡುಗೆ ನೀಡಬೇಕು ಎಂದು ಒತ್ತಾಯಿಸಿದರು.

"2025 ರ ವೇಳೆಗೆ ಭಾರತವನ್ನು ಟಿಬಿ ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಗುರಿಯನ್ನು ಹೊಂದಿದ್ದರು. ಕಲ್ಯಾಣ ಯೋಜನೆಗಳ ಪ್ರಯೋಜನಗಳು ಹೆಚ್ಚು ಅಗತ್ಯವಿರುವವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ" ಎಂದು ಅವರು ಉಪಕ್ರಮವನ್ನು ಶ್ಲಾಘಿಸಿದರು. 

ಅಂತೆಯೇ ಪ್ರಸ್ತುತ 13.5 ಲಕ್ಷ ನೋಂದಾಯಿತ ಟಿಬಿ ರೋಗಿಗಳನ್ನು ಹೊಂದಿರುವ 'ನಿ-ಕ್ಷಯ್ 2.0' ಪೋರ್ಟಲ್ ಮೂಲಕ ಟಿಬಿ ರೋಗಿಗಳಿಗೆ ಸಮುದಾಯದ ಸಹಭಾಗಿತ್ವವನ್ನು ಒದಗಿಸಿ, ಅದರಲ್ಲಿ 8.9 ಲಕ್ಷ ಸಕ್ರಿಯ ಟಿಬಿ ರೋಗಿಗಳು ದತ್ತು ತೆಗೆದುಕೊಳ್ಳಲು ರಾಜ್ಯಪಾಲರು ಒಪ್ಪಿಗೆ ನೀಡಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಕರ್ನಾಟಕ ಟಿಬಿ ಸೆಲ್ ಮತ್ತು ರಾಜಭವನದಿಂದ ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ, ಮಂಡ್ಯ ಮಿಲ್ಕ್ ಯೂನಿಯನ್ ಲಿಮಿಟೆಡ್‌ನ ಎಂಡಿ ಡಾ.ಪಿ.ಆರ್.ಮಂಜೇಶ್, ಟಾಟಾ ಮೆಡಿಕಲ್ ಮತ್ತು ಡಯಾಗ್ನೋಸ್ಟಿಕ್‌ನ ಗಿರೀಶ್ ಕೃಷ್ಣಮೂರ್ತಿ, ಡಾ.ಫಾರೂಕ್ ಅಹಮದ್ ಮಣೂರ್, ಜೀವಿತ್ ಎಂಟರ್‌ಪ್ರೈಸಸ್, ಪವನ್ ರಂಖಾ, ಎನ್.ರಾಘವನ್ ಉಪಸ್ಥಿತರಿದ್ದರು. 

ಅಂತೆಯೇ ರೋಟರಿ ಸಂಸ್ಥೆ ಹಾಗೂ ಚಾಮರಾಜನಗರದ ಗಣಿ ಮತ್ತು ಕ್ವಾರಿ ಉದ್ಯಮಿಗಳೂ ಕೂಡ ಉಪಸ್ಥಿತರಿದ್ದರು. ಇಲ್ಲಿಯವರೆಗೆ, ಕರ್ನಾಟಕದಲ್ಲಿ ಗುರುತಿಸಲಾದ 39,745 ಟಿಬಿ ರೋಗಿಗಳ ಪೈಕಿ 25,895 ರೋಗಿಗಳು ಪೋಶಣ್ ಆಧಾರ್‌ಗೆ ಒಪ್ಪಿಗೆ ನೀಡಿದ್ದಾರೆ ಮತ್ತು ಅವರಲ್ಲಿ 25,110 ರೋಗಿಗಳನ್ನು ದತ್ತು ಪಡೆಯಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com