ಚುನಾವಣೆಯಲ್ಲಿ ಸೋಲು: ಪರಾಮರ್ಶೆ ಆರಂಭಿಸಿದ ಬಿಜೆಪಿ, ಸೋತ ಅಭ್ಯರ್ಥಿಗಳ ಭೇಟಿ ಮಾಡಿದ ಹಂಗಾಮಿ ಸಿಎಂ ಬೊಮ್ಮಾಯಿ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಳಪೆ ಪ್ರದರ್ಶನಕ್ಕೆ ಕಾರಣಗಳ ಕುರಿತು ಬಿಜೆಪಿ ಪರಾಮರ್ಶೆಯನ್ನು ಆರಂಭಿಸಿದೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದ್ದು, ಕಳಪೆ ಪ್ರದರ್ಶನಕ್ಕೆ ಕಾರಣಗಳ ಕುರಿತು ಬಿಜೆಪಿ ಪರಾಮರ್ಶೆಯನ್ನು ಆರಂಭಿಸಿದೆ.

ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿಗಳನ್ನು ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಗಳವಾರ ಭೇಟಿ ಮಾಡಿದರು.

ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಸೋಲು ಕಂಡಿದ್ದು, ಸುಧಾಕರ್ ಅವರನ್ನು ನಿನ್ನೆ ಬೆಳಿಗ್ಗೆ ಭೇಟಿ ಮಾಡಿದ ಬೊಮ್ಮಾಯಿಯವರು, ಮಾತುಕತೆ ನಡೆಸಿದರು.

ಬಳಿಕ ವರುಣಾ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಮಾಜಿ ವಸತಿ ಸಚಿವ ವಿ.ಸೋಮಣ್ಣ ಅವರನ್ನೂ ಬೊಮ್ಮಾಯಿಯವರು ಭೇಟಿ ಮಾಡಿದರು.

ಸೋಮಣ್ಣ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ರಾಜಕೀಯಲ್ಲಿ ಸೋಮಣ್ಣ ಅವರು ಪುಟಿದೇಳುತ್ತಾರೆ. ಮುಂದಿನ ದಿನಗಳಲ್ಲಿ ಸೋಮಣ್ಣ ಅವರಿಗೆ ಒಳ್ಳೆಯ ಅವಕಾಶ ಸಿಗಲಿದೆ. ಈ ಕಷ್ಟದ ದಿನಗಳಲ್ಲಿ ನಾವು ಅವರ ಬೆಂಬಲಕ್ಕೆ ನಿಲ್ಲುತ್ತೇವೆ. ಸೋಮಣ್ಣ ಹಿರಿಯ ನಾಯಕರಾಗಿದ್ದು, 40 ವರ್ಷಗಳಿಂದ ಜನರ ಸೇವೆ ಮಾಡಿದ್ದಾರೆ. ವಸತಿ ಸಚಿವರಾಗಿ ಬೆಂಗಳೂರಿಗೆ ಅವರ ಕೊಡುಗೆ ಅಪಾರ. ಗೋವಿಂದರಾಜನಗರವನ್ನು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಿದರು ಎಂದು ಹೇಳಿದರು. ಅಲ್ಲದೆ, 2-3 ದಿನಗಳಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗುವುದು ಎಂದೂ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com