social_icon

ಇನ್ನೂ ರಚನೆಯಾಗದ ಹೊಸ ಸರ್ಕಾರ: ವಲಸೆ ಕುರಿತು ಗೊಂದಲದಲ್ಲಿ ಗದಗದ ಕೂಲಿಕಾರ್ಮಿಕರು!

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳು ಕಳೆದರೂ ಇನ್ನು ಹೊಸ ಸರ್ಕಾರ ರಚನೆಗೊಂಡಿಲ್ಲ. ಹೊಸ ಸರ್ಕಾರ ರಚನೆಗೊಳ್ಳದ ಹಿನ್ನೆಲೆಯಲ್ಲಿ ವಲಸೆ ಹೋಗುವ ಕುರಿತು ಗದಗದ ಕೂಲಿ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.

Published: 17th May 2023 11:27 AM  |   Last Updated: 17th May 2023 11:30 AM   |  A+A-


file photo

ಸಂಗ್ರಹ ಚಿತ್ರ

Posted By : Manjula VN
Source : The New Indian Express

ಗದಗ: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳು ಕಳೆದರೂ ಇನ್ನು ಹೊಸ ಸರ್ಕಾರ ರಚನೆಗೊಂಡಿಲ್ಲ. ಹೊಸ ಸರ್ಕಾರ ರಚನೆಗೊಳ್ಳದ ಹಿನ್ನೆಲೆಯಲ್ಲಿ ವಲಸೆ ಹೋಗುವ ಕುರಿತು ಗದಗದ ಕೂಲಿ ಕಾರ್ಮಿಕರು ಗೊಂದಲಕ್ಕೊಳಗಾಗಿದ್ದಾರೆ.

ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದು, ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಸಂಪುಟ ಸಭೆಯಲ್ಲಿಯೇ 5 ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಯೋಜನೆಗಳ ಅನುಷ್ಠಾನಕ್ಕಾಗಿ ಕಾರ್ಮಿಕರು ಕಾದು ಕುಳಿತಿದ್ದಾರೆ.

ಗದಗ ಹಲವಾರು ತಾಂಡಾಗಳಿಗೆ ನೆಲೆಯಾಗಿದ್ದು, ಪ್ರತಿ ತಾಂಡಾದಿಂದ ನೂರಾರು ಜನರು ಉದ್ಯೋಗ ಅರಸಿ ಕರ್ನಾಟಕದ ಇತರ ನಗರಗಳಿಗೆ ಮತ್ತು ಇತರ ರಾಜ್ಯಗಳಿಗೆ ವಲಸೆ ಹೋಗುತ್ತಾರೆ.

ಮೇ 10ರಂದು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ಈ ಕಾರ್ಮಿಕರು ಗದಗಕ್ಕೆ ಬಂದಿದ್ದರು. ಹೊಸ ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇ ಆದರೆ, ಅನೇಕ ವಲಸಿಗರು ಗದಗದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.

ಮನ್ರೇಗಾ ಕೆಲಸ ಇದ್ದಿದ್ದರೆ, ಆದಾಯ ಸಿಗುತ್ತಿತ್ತು. ಇದರ ಜೊತೆಗೆ ಸರ್ಕಾರ ಪ್ರತಿ ಮನೆಗೆ ರೂ.2 ಸಾವಿರ ನೀಡುವುದಾಗಿ ವಿದ್ಯುತ್'ಗೆ ಹಣ ಪಾವತಿಸುವಲ್ಲಿ, ಉಚಿತ ಬಸ್ ಪ್ರಯಾಣ, ಉಚಿತ ಪಡಿತರ ಭರವಸೆ ನೀಡಿದೆ. ಈ ಎಲ್ಲಾ ಸೌಲಭ್ಯಗಳು ಜಾರಿಯಾಗಿದ್ದೇ ಆದರೆ, ಉದ್ಯೋಗ ಅರಸಿ ಬೇರೆ ನಗರ ಹಾಗೂ ರಾಜ್ಯಗಳಿಗೆ ಪ್ರಯಾಣಿಸುವ ಅಗತ್ಯ ಎದುರಾಗುವುದಿಲ್ಲ ಎಂದು ಕಾರ್ಮಿಕರೊಬ್ಬರು ಹೇಳಿದ್ದಾರೆ.

ಇನ್ನು ಕೆಲ ವಲಸಿಗರು ಈ ಭರವಸೆಗಳೆಲ್ಲಾ ಚುನಾವಣಾ ತಂತ್ರವಷ್ಟೇ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಉಚಿತ ಯೋಜನೆಗಳ ನೀಡಲು ಕೆಲವು ಷರತ್ತುಗಳನ್ನು ವಿಧಿಸುತ್ತದೆ. ಹೀಗಾಗಿ ನಮ್ಮ ನಮ್ಮ ಕೆಲಸಗಳಿಗೆ ಮರಳುವುದು ಉತ್ತಮ ಎಂದು ಹೇಳುತ್ತಿದ್ದಾರೆ. ಆದರೆ, ಸ್ಥಳೀಯ ಮುಖಂಡರು ಇನ್ನೂ ಸ್ವಲ್ಪ ಸಮಯ ಕಾದು ನೋಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.

ಲಕ್ಷ್ಮೇಶ್ವರದ ಲಾಲಪ್ಪ ರಾಠೋಡ್ ಮಾತನಾಡಿ, ‘ನಮ್ಮ ನಗರ, ಗ್ರಾಮ, ತಾಂಡಾಗಳಲ್ಲಿ ಎಲ್ಲ ಸೌಲಭ್ಯ ಸಿಕ್ಕರೆ ಬೇರೆ ಕಡೆ ಹೋಗುವುದೇಕೆ? ದಿನನಿತ್ಯದ ಕೆಲಸ, ಉಚಿತ ಊಟ, ವಿದ್ಯುತ್ ಬಿಲ್ ಇಲ್ಲ, ತಿಂಗಳಿಗೆ 2000 ರೂ. ಸಿಕ್ಕರೆ ಇಲ್ಲಿ ನೆಮ್ಮದಿಯ ಜೀವನ ನಡೆಸುತ್ತೇವೆ. ಸರ್ಕಾರದ ಘೋಷಣೆಗಾಗಿ ಕಾಯುತ್ತಿದ್ದೇವೆ ಮೊಬೈಲ್ ಫೋನ್ ಹೊಂದಿರುವವರು ಗ್ಯಾರಂಟಿಗೆ ಅರ್ಹರಲ್ಲ ಎಂದು ಹೇಳಿದ್ದೇ ಆದರೆ, ಕೆಲಸ ಅರಸಿ ಗೋವಾಗೆ ಹೋಗುತ್ತೇವೆಂದು ಹೇಳಿದ್ದಾರೆ.

ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ನಿವಾಸಿಗಳಿಗೆ ಹೆಚ್ಚಿನ ಉದ್ಯೋಗ ಕಾರ್ಡ್‌ಗಳನ್ನು ನೀಡುವ ಮೂಲಕ ವಲಸೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆಂದು ಜಿಲ್ಲಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ಸರ್ಕಾರ ಏನು ನೀಡುತ್ತದೆ ಎಂಬುದನ್ನು ನಾವು ಹೇಳಲು ಸಾಧ್ಯವಿಲ್ಲ, ಆದರೆ, ಅವರು ನೀಡಿದರೆ, ನಾವು ಜಾಗೃತಿ ಮೂಡಿಸುತ್ತೇವೆ ಮತ್ತು ಎಲ್ಲರಿಗೂ ಯೋಜನೆ ತಲುಪುವಂತೆ ಮಾಡುತ್ತೇವೆಂದು ತಿಳಿಸಿದ್ದಾರೆ.


Stay up to date on all the latest ರಾಜ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp