ಇನ್ನು ಇಂದು ಅರ್ಜಿ ಸಲ್ಲಿಕೆ ಮಾಡಿದ್ದ ವಕೀಲ ಪ್ರಶಾಂತ್ ಭೂಷಣ್ ಅವರು ತಮ್ಮ ವಾದ ಮಂಡಿಸಿದರು. ಈ ವೇಳೆ ಸರ್ಕಾರ ನಿರ್ಣಯಗಳನ್ನು ಪ್ರಶ್ನಿಸಿದ ಭೂಷಣ್ ಯೋಜನೆಯನ್ನು ತ್ವರಿತಗೊಳಿಸಿದ್ದು, ಅನುಭವವೇ ಇಲ್ಲದ ರಿಲಯನ್ಸ್ ಸಂಸ್ಥೆಗೆ ಮಣೆಹಾಕಿದ್ದು, ಎಚ್ಎಎಲ್ ಕಡೆಗಣನೆ, 126 ವಿಮಾನಗಳ ಬದಲಿಗೆ 36 ವಿಮಾನಗಳ ಖರೀದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದು, ತಂತ್ರಜ್ಞಾನ ಹಂಚಿಕೆ ಕುರಿತ ಒಪ್ಪಂದದ ತಿದ್ದುಬಪಡಿ ಸೇರಿದಂತೆ ಹಲವು ಪ್ರಶ್ನೆಗಳನ್ನು ಪ್ರಶಾಂತ್ ಭೂಷಣ್ ಮುಂದಿಟ್ಟರು.