ಕಾಶ್ಮೀರ ಪ್ರಶ್ನೆಯನ್ನು ಇತ್ಯರ್ಥಪಡಿಸಲು ಭಾರತದ ಇತರ ಪಕ್ಷಗಳು ಯತ್ನಿಸಿದಲ್ಲಿ ಬಲಪಂಥೀಯರ ಟೀಕೆ, ಖಂಡನೆಗಳಿಗೆ ತುತ್ತಾಗಬೇಕಾದೀತೆಂಬ ಭಯ ಅವುಗಳಿಗೆ ಇದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಸುರ್ಜೇವಾಲಾ ಅವರು ಪಾಕಿಸ್ಥಾನ ಮೋದಿ ಜತೆಗೆ ಅಧಿಕೃತ ಹೊಂದಾಣಿಕೆ ಮಾಡಿಕೊಂಡಿದೆ; ಮೋದಿಗೆ ಓಟ್ ಹಾಕಿದರೆ ಪಾಕಿಸ್ಥಾನಕ್ಕೆ ಓಟ್ ಹಾಕಿದ ಹಾಗೆ ಎಂದು ಟೀಕಿಸಿದ್ದಾರೆ.