ಇದಕ್ಕೂ ಮುನ್ನ ಖಾಸಗಿ ಹವಮಾನ ಸಂಸ್ಥೆ, ಈ ವರ್ಷ ಮುಂಗಾರು ಮಳೆ ಸಾಕಷ್ಟು ಕೊರತೆಯಾಗಲಿದೆ ಎಂದು ವರದಿ ಮಾಡಿತ್ತು. ಇದು ರೈತ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಭಾರತೀಯ ಹವಾಮಾನ ಇಲಾಖೆ ಆತಂಕವನ್ನು ದೂರ ಮಾಡಿದ್ದು ಮುಂಗಾರು ಸಾಧಾರಣವಾಗಿರಲಿದೆ ಎಂಬ ಮುನ್ಸೂಚನೆ ನೀಡಿರುವುದು ರೈತ ಸಮುದಾಯಕ್ಕೆ ನಿರಾಳತೆ ತಂದಿದೆ.