ಪತ್ನಿಯ ಮೇಲಿನ ಸಿಟ್ಟು: ಇಬ್ಬರು ಮಕ್ಕಳ ಕೊಂದು, ಮೂರನೇ ಮಗುವನ್ನೂ ಕೊಲ್ಲಲೆತ್ನಿಸಿದ ತಂದೆಯ ಬಂಧನ

ಜಿಲ್ಲೆಯ ರಾಮಚಂದ್ರಪುರಂನ ಬೊಂಬಾಯಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ, ಪತ್ನಿಯ ಮೇಲಿನ ಸಿಟ್ಟಿನಿಂದ ಕಂಠಪೂರ್ತಿ ಕುಡಿದು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಂಗಾರೆಡ್ಡಿ: ಜಿಲ್ಲೆಯ ರಾಮಚಂದ್ರಪುರಂನ  ಬೊಂಬಾಯಿ ಕಾಲೋನಿಯಲ್ಲಿ ವ್ಯಕ್ತಿಯೊಬ್ಬ, ಪತ್ನಿಯ ಮೇಲಿನ ಸಿಟ್ಟಿನಿಂದ ಕಂಠಪೂರ್ತಿ ಕುಡಿದು ಬಂದು ರಾತ್ರಿ ಮನೆಯಲ್ಲಿ ಮಲಗಿದ್ದ ಏಳು ವರ್ಷದ ಮಗ, 4ವರ್ಷದ ಮಗಳನ್ನು ಉಸಿರು ಗಟ್ಟಿಸಿಕೊಂದಿದ್ದಲ್ಲದೆ, 10ವರ್ಷದ ದೊಡ್ಡ ಮಗಳನ್ನು ಹತ್ಯೆ ನಡೆಸಲು ಮುಂದಾದಾಗ ಆಕೆ ತೀವ್ರ ಗಾಯಗೊಂಡು ತಪ್ಪಿಸಿಕೊಂಡಿರುವ ಭಯಾನಕ ಘಟನೆ ಮಂಗಳವಾರ ಮಧ್ಯರಾತ್ರಿ ರಾತ್ರಿ ನಡೆದಿದೆ.
ಬೊಂಬಾಯಿ ಕಾಲೋನಿಯಲ್ಲಿ ಕುಮಾರ್ ಎಂಬುವನು, ತನ್ನ ಪತ್ನಿ ಶಿರಿಷಾ  ಹಾಗೂ ಮೂವರು ಮಕ್ಕಳಾದ ಮಲ್ಲೇಶ್ವರಿ (10), ಅಖಿಲ್(7) ಹಾಗೂ ಶರಣ್ಯ (4) ರೊಂದಿಗೆ ವಾಸವಾಗಿದ್ದ.
ಪತಿಯೊಂದಿಗೆ ಗಲಾಟೆ ಮಾಡಿಕೊಂಡ ಪತ್ನಿ ಶಿರಿಷ ಇತ್ತೀಚಿಗೆ ತವರು ಮನೆಗೆ ಸೇರಿದ್ದಳು. ಇದರಿಂದ ತೀವ್ರ ಕುಪಿತಗೊಂಡ ಕುಮಾರ್ ಮಂಗಳವಾರ ರಾತ್ರಿ ಕಂಠಪೂರ್ತಿ ಕುಡಿದು ಪುಟ್ಟ ಮಕ್ಕಳಾದ ಅಕಿಲ್, ಶರಣ್ಯರ ಕತ್ತು ಹಿಸುಕಿ ಸಾಯಿಸಿ, ದೊಡ್ಡ ಮಗಳು ಶರಣ್ಯಾಳನ್ನು ಚಾಕುವಿನಿಂದ ಹಿರಿದು ಕೊಲ್ಲಲು ಮುಂದಾದಾಗ ಆಕೆ ತೀವ್ರವಾಗಿ ಗಾಯಗೊಂಡು ತಪ್ಪಿಸಿಕೊಂಡು ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಕುಮಾರ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com