ರಾಜಸ್ಥಾನ ಸಿಖರ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ನಾಗಾ ಗ್ರಾಮದ ಗಿರಿಧಾರಿ ಎಂಬುವವರು ತಮ್ಮ ಇಬ್ಬರು ಪುತ್ರಿಯರಿಗೆ ಮದುವೆ ಮಾಡಿದ್ದಾರೆ. ಮದುವೆ ಮಾರನೆಯ ದಿನ ಅವರನ್ನು ಕಾರಿನಲ್ಲಿ ಅವರ ಗಂಡಂದಿರ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಮಾರ್ಗ ಮಧ್ಯೆ ವಾಹನಗಳಲ್ಲಿ ಬಂದ ದುಷ್ಕರ್ಮಿಗಳು ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಆರಂಭದಲ್ಲಿ ಇದನ್ನು ಡಾಕಾಯಿತರ ದಾಳಿ ಎಂದು ಭಾವಿಸಲಾಗಿತ್ತು. ಆದರೆ ಬಳಿಕ ಅವರು ಕಾರಿನ ಗಾಜು ಒಡೆದು ಕಾರಿನೊಳಗೆ ನುಗ್ಗಲು ಯತ್ನಿಸಿದ್ದಾರೆ.