ಕಾಂಗ್ರೆಸ್ ಸೇರಿದ ಅಪ್ರಾಪ್ತ ಬಾಲಕಿ ಅತ್ಯಾಚಾರ ಆರೋಪಿ ಮಾಜಿ ಗೋವಾ ಸಚಿವ, ಪಣಜಿಯಿಂದ ಸ್ಪರ್ಧೆ?

ಗೋವಾ ಮಾಜಿ ಬಿಜೆಪಿ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರಾಟೆ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಣಜಿಯಿಂದ...
ಅಟನಾಸಿಯೋ ಮಾನ್ಸೆರಾಟೆ
ಅಟನಾಸಿಯೋ ಮಾನ್ಸೆರಾಟೆ
ಪಣಜಿ: ಗೋವಾ ಮಾಜಿ ಬಿಜೆಪಿ ಶಿಕ್ಷಣ ಸಚಿವ ಅಟನಾಸಿಯೋ ಮಾನ್ಸೆರಾಟೆ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಪಣಜಿಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ.
ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿಧನದಿಂದ ತೆರವಾಗಿದ್ದ ಪಣಜಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಮನೋಹರ್ ಪುತ್ರ ಉತ್ಪಾಲ್ ಪರಿಕ್ಕರ್ ಸ್ಪರ್ಧಿಸುತ್ತಿದ್ದು ಇವರಿಗೆ ಎದುರಾಗಿ ಕಾಂಗ್ರೆಸ್ ಕಡೆಯಿಂದ ಅಟನಾಸಿಯೋ ಸ್ಪರ್ಧಿಸುವ ಸಾಧ್ಯತೆ ಇದೆ. 
ಪಕ್ಷಗಳನ್ನು ಬದಲಾಯಿಸುವುದರಲ್ಲಿ ಮಾನ್ಸೆರಾಟೆ ಇತಿಹಾಸವೇ ಇದೆ. ಹೌದು ಯುನೈಟೆಡ್ ಗೋವನ್ ಡೆಮೋಕ್ರಾಟಿಕ್ ಪಾರ್ಟಿ(ಯುಜಿಡಿಪಿ) ರಾಜಕೀಯ ಜೀವನ ಆರಂಭಿದ್ದ ಅವರು ನಂತರ 2004ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಇದೀಗ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣದಿಂದ ಸಚಿವ ಸ್ಥಾನ ಕಳೆದುಕೊಂಡಿರುವ ಮಾನ್ಸೆರಾಟೆ ಇದೀಗ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com