ಕಾನ್ಪುರ್ ಸಮೀಪ 'ಪೂರ್ವ ಎಕ್ಸ್ ಪ್ರೆಸ್' ರೈಲು ಅಪಘಾತ, 14 ಮಂದಿಗೆ ಗಾಯ

ಉತ್ತರ ಪ್ರದೇಶದ ಕಾನ್ಪುರ್ ಸಮೀಪ ಪೂರ್ವ ದೆಹಲಿ-ಹೌರಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು ಕನೀಷ್ಟ 14 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಕಾನ್ಪುರ್ ಸಮೀಪ 'ಪೂರ್ವ ಎಕ್ಸ್ ಪ್ರೆಸ್' ರೈಲು ಅಪಘಾತ, 14 ಮಂದಿಗೆ ಗಾಯ
ಕಾನ್ಪುರ್ ಸಮೀಪ 'ಪೂರ್ವ ಎಕ್ಸ್ ಪ್ರೆಸ್' ರೈಲು ಅಪಘಾತ, 14 ಮಂದಿಗೆ ಗಾಯ
ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ್ ಸಮೀಪ ಪೂರ್ವ ದೆಹಲಿ-ಹೌರಾ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ್ದು ಕನೀಷ್ಟ 14 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಪ್ರಯಾಗದಿಂದ  ಪೂರ್ವ ದೆಹ;ಲಿಯತ್ತ ಪ್ರ್ಯಾಣಿಸುತ್ತಿತ್ತು. ಘಟನೆ ರೂಮಾ ರೈಲು ನಿಲ್ದಾಣದ ಬಳಿ ಸಂಭವಿಸಿದೆ. ಇಲ್ಲಿಂದ ಸುಮಾರು 20 ಕಿ.ಮೀ ದೂರದಲ್ಲಿ ಕಾನ್ಪುರ್ ನಗರ ಜಿಲ್ಲೆಯಲ್ಲಿ 12.50 ಗಂಟೆಗೆ ರೈಲು ದುರಂತ ನಡೆದಿದೆ. ಎಕ್ಸ್‌ ಪ್ರೆಸ್‌ ರೈಲಿನ 12 ಬೋಗಿಗಳು ಹಳೆ ತಪ್ಪಿದ್ದು ಅವು ಸಂಪೂರ್ಣ ಮುಗುಚಿ ತಲೆಕೆಳಗಾಗಿದೆ.
ಘಟನೆಯಲ್ಲಿ ಇದುವರೆಗೆ ಯಾವುದೇ ಸಾವು ನೋವಾದ ಕುರಿತು ವರದಿಯಾಗಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪ್ತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಣೀಡಲಾಗಿದು ಇವರಲ್ಲಿ ಕೆಲವರು ಸಣ್ಣ ಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದು ಆಸ್ಪ್ತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸ್ಥಳದಲ್ಲಿ ಕಾನ್ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಜರಿಒದ್ದು ಪರಿಹಾರ ಕಾರ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ರೈಲ್ವೆ ರಕ್ಷಣಾ ಪಡೆ ರೈಲು ಅಪಘಾತದ ವಿವರ ಹಾಗೂ ಗಾಯಾಳುಗಳ ಕುರಿತ ಮಾಹಿತಿ ತಿಳಿಯಲು ಸಹಾಯವಾಣಿ ಪ್ರಾರಂಭಿಸಿದೆ.ಸಂಬಂಧ ಪಟ್ಟವರು,  1072, 9454403738, 9454401463, 9454401075, 9454400384 and 0512-23333111/112/113. ಸಂಖ್ಯೆಗಳಿಗೆ ಕರೆಮಾಡಿ ಅಗತ್ಯ ಮಾಹಿತಿ ಪಡೆಯಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com