ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಷಯ ಪ್ರಸ್ತಾಪಿಸಿ, ಇದೊಂದು ಗಂಭೀರ ಹಾಗೂ ಸಾರ್ವಜನಿಕ ಮಹತ್ವದ ವಿಷಯ ಎಂದು ಉಲ್ಲೇಖಿಸಿದಾಗ ನ್ಯಾಯಪೀಠ ವಿಷಯದ ವಿಚಾರಣೆ ನಡೆಸಿತು. ಆದರೆ, ಮುಖ್ಯನ್ಯಾಯಮೂರ್ತಿ ನೇತೃತ್ವದ ನ್ಯಾಯಪೀಠ ಆರೋಪಗಳ ಸಂಬಂಧ ಯಾವುದೇ ಆದೇಶ ಹೊರಡಿಸಲಿಲ್ಲ. ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಿಸಲು ಮಾಧ್ಯಮಗಳು ಸಂಯಮದಿಂದ ವರ್ತಿಸಬೇಕೆಂದು ಸೂಚಿಸಿತು. ಆರೋಪಗಳು ಆಧಾರ ರಹಿತ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.