ಬಾಂಬ್ ಕಟ್ಟಿ ರಾಹುಲ್ ಗಾಂಧಿಯನ್ನು ಶತ್ರು ರಾಷ್ಟ್ರದಲ್ಲಿ ಉಡಾಯಿಸಬೇಕಿತ್ತು: ಪಂಕಜಾ ಮುಂಡೆ

ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಬಾಂಬ್ ಜೊತೆ ಕಟ್ಟಿ ಉಡಾಯಿಸಬೇಕಿತ್ತು ಎಂದು ಬಿಜೆಪಿ ನಾಯಕ...
ರಾಹುಲ್ ಗಾಂಧಿ-ಪಂಕಜಾ ಮುಂಡೆ
ರಾಹುಲ್ ಗಾಂಧಿ-ಪಂಕಜಾ ಮುಂಡೆ
ಮುಂಬೈ: ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಸೇನೆಯ ಏರ್ ಸ್ಟ್ರೈಕ್ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಬಾಂಬ್ ಜೊತೆ ಕಟ್ಟಿ ಉಡಾಯಿಸಬೇಕಿತ್ತು ಎಂದು ಬಿಜೆಪಿ ನಾಯಕ ಪಂಕಜಾ ಮುಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರ ಸೊಂಟಕ್ಕೆ ಬಾಂಬ್ ಕಟ್ಟಿ ಶತ್ರು ನೆಲದಲ್ಲಿ ಉಡಾಯಿಸಬೇಕಿತ್ತು. ಆದ ವಾಯುದಾಳಿ ಕುರಿತು ಸಾಕ್ಷ್ಯ ಕೇಳುತ್ತಿರುವವರಿಗೆ ಸಮಾಧಾನವಾಗುತ್ತಿತ್ತು ಎಂದು ಪಂಕಜಾ ಮುಂಡೆ ಹೇಳಿದ್ದಾರೆ.
ಜಲ್ನಾ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ಪಂಕಜಾ ಮುಂಡೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ.
ಪಂಕಜಾ ಮುಂಡೆ ಅವರ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿರುವ ಕಾಂಗ್ರೆಸ್, ಸಚಿವರು ರಾಜಕೀಯ ಆರೋಪ ಪ್ರತ್ಯಾರೋಪಗಳ ಘನತೆಯನ್ನೂ ಕುಂದಿಸಿದ್ದಾರೆ ಎಂದು ಹರಿಹಾಯ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com