ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನಿಗೆ ಬುದ್ಧಿ ಕಲಿಸಿದ ಆನೆ, 50 ಮೀಟರ್ ದೂರ ಒಯ್ದು ಎಸೆದ ಗಜರಾಜ!

ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನೊಬ್ಬನನ್ನು ಕಂಡು ಕೋಪಗೊಂಡ ಆನೆ ಆತನನ್ನು ತನ್ನ ಸೊಂಡಲಿನಿಂದ ಸುತ್ತಿಕೊಂಡು ಬರೋಬ್ಬರಿ 50 ಮೀಟರ್ ದೂರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕೋಲ್ಕತ್ತಾ: ಬಯಲಿನಲ್ಲಿ ಶೌಚ ಮಾಡುತ್ತಿದ್ದ ರೈತನೊಬ್ಬನನ್ನು ಕಂಡು ಕೋಪಗೊಂಡ ಆನೆ ಆತನನ್ನು ತನ್ನ ಸೊಂಡಲಿನಿಂದ ಸುತ್ತಿಕೊಂಡು ಬರೋಬ್ಬರಿ 50 ಮೀಟರ್ ದೂರ ಎಳೆದೊಯ್ದು ದೂರಕ್ಕೆಸೆದ ಪ್ರಕರಣ ಬೆಳಕಿಗೆ ಬಂದಿದೆ.
ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಬೆಳಗ್ಗೆ ಸುಮಾರು 4 ಗಂಟೆಗೆ ನಿರಂಜನ್ ಸಶೀಹ್ ಎಂಬಾತ ಪುರುಲಿಯಾದ ಅಯೋಧ್ಯಾ ಹಿಲ್ಸ್ ಬಳಿಯ ಹಳ್ಳಿಯಲ್ಲಿರುವ ತನ್ನ ಮನೆ ಬಳಿ ಬಯಲು ಶೌಚ ಮಾಡುತ್ತಿದ್ದ. 
ಈ ವೇಳೆ ಏನೋ ಶಬ್ಧ ಬರುತ್ತಿರುವುದನ್ನು ಗಮನಿಸಿದ ನಿರಂಜನ್ ಹಿಂದೆ ತಿರುಗಿ ನೋಡುತ್ತಿದ್ದಂತೆ ಆನೆಯೊಂದು ತನ್ನ ಸೊಂಡಲಿನಿಂದ ಆತನನ್ನು ಸುತ್ತಿಕೊಂಡಿದೆ. ಅಲ್ಲಿಂದ 50 ಮೀಟರ್ ದೂರದವರೆಗೆ ಓಡಿ ಹೋಗಿ ಎಸೆದು ಅಲ್ಲಿಂದ ಅರಣ್ಯದೆಡೆ ಓಡಿ ಹೋಗಿದೆ.
ಈ ವೇಳೆ ರೈತನ ಕಾಲು ಹಾಗೂ ಬೆನ್ನಿಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸದ್ಯ ಪ್ರಾಥಮಿಕ ಚಿಕಿತ್ಸೆ ಪಡೆದು ಹುಷಾರಾಗಿರುವ ನಿರಂಜನ್, ಈ ಬಗ್ಗೆ ಪ್ರತಿಕ್ರಿಯಿಸಿದ್ದು ಮೊದಲಿಗೆ ನಾನು ಸಾಯುತ್ತೇನೆ ಎಂದು ಭಾವಿಸಿದ್ದೆ. ಆ ವೇಳೆ ನನ್ನನ್ನು ಕಾಪಾಡು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದೆ. ಆನೆ ನನ್ನನ್ನು ಬಿಟ್ಟಿದ್ದೇ ತಡ ಜೀವ ಬಂದಂತಾಯ್ತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com