ಅಮೇಥಿ: ರಾಷ್ಟ್ರೀಯತೆಯ ವಿಷಯವಾಗಿ ಎಐಸಿಸಿ ಉಪಾಧ್ಯಕ್ಷೆ ಪ್ರಿಯಾಂಕ ವಾದ್ರ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
"ನಾನೂ ಮೋದಿ ಎನ್ನುವುದರಲ್ಲಿ ರಾಷ್ಟ್ರೀಯತೆಗೆ ಯಾವ ಅರ್ಥ ಇದೆ? ರಾಷ್ಟ್ರೀಯತೆ ಎಂದರೆ ಏನು? ಅದು ದೇಶಭಕ್ತಿ, ದೇಶದೆಡೆಗಿನ ಪ್ರೀತಿ. ದೇಶ ಅಂದರೆ ಯಾವುದು? ಜನತೆ ಹಾಗೂ ಅವರ ಪ್ರೀತಿ" ಎಂದು ಪ್ರಿಯಾಂಕ ಗಾಂಧಿ ರಾಷ್ಟ್ರೀಯತೆಯ ಪಾಠ ಮಾಡಿದ್ದಾರೆ.
ಕೇವಲ ವ್ಯಕ್ತಿಗತ ಆಕರ್ಷಣೆ ಹೊಂದಿದ್ದರೆ, ಇದು ಯಾವ ರೀತಿಯ ರಾಷ್ಟ್ರೀಯತೆ? ಎಂದು ಅಮೇಥಿಯಲ್ಲಿ ಮಾತನಾಡಿರುವ ಪ್ರಿಯಾಂಕ ವಾದ್ರ ಪ್ರಶ್ನಿಸಿದ್ದಾರೆ.
ಹಣ ಕೊಟ್ಟು ಜನರನ್ನು ಕರೆಸಿ ಭಾಷಣ ಮಾಡುವುದು, ಆ ಮೂಲಕ ಸಂದೇಶ ರವಾನೆ ಮಾಡುವುದು ಸುಲಭ ಆದರೆ ಜನರ ಸಮಸ್ಯೆಯನ್ನು ಪರಿಹರಿಸುವುದು ಮುಖ್ಯ ಎಂದು ಪ್ರಿಯಾಂಕ ವಾದ್ರ ಅಭಿಪ್ರಾಯಪಟ್ಟಿದ್ದಾರೆ.
ವಾರಾಣಸಿಯ ಒಂದೆ ಒಂದು ಗ್ರಾಮಕ್ಕೂ ಸಹ ಮೋದಿ ಭೇಟಿ ನೀಡಿಲ್ಲ, ಅವರ ಸಮಸ್ಯೆಗಳನ್ನು ಆಲಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆರೋಪ ಮಾಡಿದ್ದಾರೆ.