ರಾಜಸ್ಥಾನ: ಹೆಚ್ಚು ಹಣ ನೀಡಿದವರಿಗೆ ಪಕ್ಷದಲ್ಲಿ ಟಿಕೆಟ್ - ಬಿಎಸ್ ಪಿ ಶಾಸಕ

ಹೆಚ್ಚು ಹಣ ಕೊಟ್ಟವರಿಗೆ ತಮ್ಮ ಪಕ್ಷದಲ್ಲಿ ಟಿಕೆಟ್ ನೀಡಲಾಗುತ್ತದೆ ಎಂಬ ಬಿಎಸ್ ಪಿ ಶಾಸಕನ ಹೇಳಿಕೆ ರಾಜಸ್ಥಾನದ ರಾಜಕೀಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ.
ಮಾಯಾವತಿ
ಮಾಯಾವತಿ
ಜೈಪುರ: ಹೆಚ್ಚು ಹಣ ಕೊಟ್ಟವರಿಗೆ ತಮ್ಮ ಪಕ್ಷದಲ್ಲಿ  ಟಿಕೆಟ್ ನೀಡಲಾಗುತ್ತದೆ ಎಂಬ ಬಿಎಸ್ ಪಿ ಶಾಸಕನ ಹೇಳಿಕೆ ರಾಜಸ್ಥಾನದ ರಾಜಕೀಯದಲ್ಲಿ ಹೊಸ ವಿವಾದ ಹುಟ್ಟುಹಾಕಿದೆ.
ರಾಜಸ್ಥಾನದ ವಿಧಾನಸಭೆಯಲ್ಲಿ ಗುರುವಾರ ಆಯೋಜಿಸಲಾಗಿದ್ದ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಯೂನಿಯನ್ ಅಧ್ಯಾಯ ಮತ್ತು ಸಾರ್ವಜನಿಕ ನೀತಿ ಕುರಿತು ವಿಚಾರಗೋಷ್ಠಿಯಲ್ಲಿ ಉದೈಪುರ್ವತಿ ಬಿಎಸ್ಪಿ ಶಾಸಕ ರಾಜೇಂದ್ರ ಸಿಂಗ್ ಗುಡಾ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಹರಾಜಿನಲ್ಲಿ ಹೆಚ್ಚು ಬಿಡ್ ಮಾಡುವವರಿಗೆ ಪಕ್ಷದ ಟಿಕೆಟ್ ದೊರೆಯುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ರಾಜೇಂದ್ರ ರಾಥೋರ್, ಈ ಹೇಳಿಕೆಗೆ ಬಿಎಸ್ಪಿ ಪಕ್ಷದ ವರಿಷ್ಠೆ ಮಾಯಾವತಿ ಅವರೇ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. 
ಆದರೆ, ತಮ್ಮ ಪಕ್ಷದ ಶಾಸಕನೇ ನೀಡಿರುವ ಹೇಳಿಕೆ ಬಗ್ಗೆ ಬಿಎಸ್ಪಿ ನಾಯಕರು ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಶಾಸಕರ ಸಂಸದೀಯ ವ್ಯವಹಾರಗಳಿಗೆ ಆಯೋಜಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಚಾಲನೆ ನೀಡಿದ್ದರು. ರಾಜಸ್ತಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಆರು ಶಾಸಕರನ್ನು ಹೊಂದಿರುವ ಬಿಎಸ್ಪಿ ಬಾಹ್ಯ ಬೆಂಬಲ ನೀಡುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com