ನೇಯ್ವೆಲ್ಲಿಯಲ್ಲಿ ವಾಸವಾಗಿರುವ 65 ವರ್ಷದ ಜಯರಾಜ್, ಸಣ್ಣ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು, ಈ ಅಂಗಡಿಗೆ ನುಗ್ಗಿದ ಕಳ್ಳ ಅಲ್ಲಿ ಹಣ ಕದಿಯಲು ನೋಡಿದ್ದಾನೆ, ಆದರೆ ಅಲ್ಲಿ ಹಣ ಸಿಗಲಿಲ್ಲ, ಹೀಗಾಗಿ ಬೇಸರಗೊಂಡು ಪತ್ರವೊಂದನ್ನು ಬರೆದಿದ್ದಾನೆ, ನನ್ನ ಜೀವವನ್ನು ಪಣಕ್ಕಿಟ್ಟು ನಿನ್ನ ಅಂಗಡಿ ಮುರಿದು ಬರಲು ರಿಸ್ಕ್ ತೆಗೆದುಕೊಂಡೆ, ಆದರೆ ಒಳಗೆ ಬಂದು ನೋಡಿದರೇ ಒಂದು ಬಿಡಿದಗಾಸು ಸಿಗಲಿಲ್ಲ, ಹೀಗಾಗಿ ಈ ಕೋತಿ ಚೇಷ್ಟೆ ಮಾಡಿದ್ದೇನೆ ಎಂದು ಬರೆದಿದ್ದಾನೆ.