ಅಯೋಧ್ಯೆ ವಿಷಯದ ಮಧ್ಯಸ್ಥಿಕೆ ಸಮಿತಿಯು ಭೂವಿವಾದ ವಿಚಾರಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಹೇಳಿದೆ.ಮತ್ತು ಆಗಸ್ಟ್ 6 ರಿಂದ ಈ ಪ್ರಕರಣ ಕುರಿತಂತೆ ಪ್ರತಿನಿತ್ಯ ವಿಚಾರಣೆ ನಡೆಸಲು ತೀರ್ಮಾನಿಸಿದೆ. ಸಂವಿಧಾನ ಪೀಠದ ಮುಖ್ಯಸ್ಥರಾಗಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, "ನಾವು ಮಧ್ಯಸ್ಥಿಕೆ ವರದಿಯನ್ನು ಸ್ವೀಕರಿಸಿದ್ದೇವೆ. ಮಧ್ಯಸ್ಥಿಕೆ ಸಮಿತಿಯು ಯಾವುದೇ ಅಂತಿಮತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲ. ಪ್ರಕರಣದ ವಿಚಾರಣೆಯುಆ. 6ರಿಂದ ನಿತ್ಯವೂ ನಡೆಯಲಿದೆ." ಎಂದಿದ್ದಾರೆ.