ಸಂಸತ್ ಕಲಾಪ ಮುಗಿದಿಲ್ಲ ಸೋಮವಾರ, ಮಂಗಳವಾರದವರೆಗೆ ಕಾದು ನೋಡಿ: ಜಮ್ಮು-ಕಾಶ್ಮೀರ ರಾಜ್ಯಪಾಲರ ಮಾರ್ಮಿಕ ನುಡಿ!

ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಈ ವಿಷಯದ ಬಗ್ಗೆ ದೇಶದ ಗಮನ ಕೇಂದ್ರೀಕೃತವಾಗುವಂತೆ ಮಾಡಿದೆ. ಈ ನಡುವೆ ಜಮ್ಮು-ಕಾಶ್ಮೀರ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸಂಸತ್ ಕಲಾಪ ಮುಗಿದಿಲ್ಲ ಸೋಮವಾರ, ಮಂಗಳವಾರದವರೆಗೆ ಕಾದು ನೋಡಿ: ಜಮ್ಮು-ಕಾಶ್ಮೀರ ರಾಜ್ಯಪಾಲರ ಮಾರ್ಮಿಕ ನುಡಿ!
ಸಂಸತ್ ಕಲಾಪ ಮುಗಿದಿಲ್ಲ ಸೋಮವಾರ, ಮಂಗಳವಾರದವರೆಗೆ ಕಾದು ನೋಡಿ: ಜಮ್ಮು-ಕಾಶ್ಮೀರ ರಾಜ್ಯಪಾಲರ ಮಾರ್ಮಿಕ ನುಡಿ!
ಶ್ರೀನಗರ: ಕಾಶ್ಮೀರದಲ್ಲಿ ಹೆಚ್ಚುವರಿ ಸೇನಾ ತುಕಡಿಗಳನ್ನು ನಿಯೋಜನೆ ಮಾಡಿರುವುದು ಈ ವಿಷಯದ ಬಗ್ಗೆ ದೇಶದ ಗಮನ ಕೇಂದ್ರೀಕೃತವಾಗುವಂತೆ ಮಾಡಿದೆ. ಈ ನಡುವೆ ಜಮ್ಮು-ಕಾಶ್ಮೀರ ರಾಜ್ಯಪಾಲರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. 
ಕಾಶ್ಮೀರಕ್ಕೆ ಸಂಬಂಧಿಸಿದ ಊಹಾಪೋಹಗಳ ಬಗ್ಗೆ ಮಾತನಾಡಿರುವ ರಾಜ್ಯಪಾಲ ಸತ್ಯಪಾಲ್ ಮಲೀಕ್, ಊಹಾಪೋಹಗಳಿಗೆ ಕಿವಿಗೊಡುವುದರ ಬದಲು ಸೋಮವಾರ, ಮಂಗಳವಾರದವರೆಗೂ ಕಾದು ನೋಡಿ, ಜಮ್ಮು-ಕಾಶ್ಮೀರದಲ್ಲಿ ಏನೇ ನಡೆದರೂ ಸಹ ರಹಸ್ಯವಾಗಿ ನಡೆಯುವುದಿಲ್ಲ, ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಬಗ್ಗೆ ಚರ್ಚೆ ನಡೆಯಲಿದೆ, ಆದ್ದರಿಂದ ವದಂತಿಗಳಿಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ. 
ಸಂಸತ್ ಕಲಾಪ ಇನ್ನೂ ಮುಗಿದಿಲ್ಲ ಆದ್ದರಿಂದ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇನ್ನು 2 ದಿನ ಕಾದು ನೋಡಿ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com