ಮತ್ತೊಂದೆಡೆ ಟ್ವೀಟ್ ಮಾಡಿರುವ ಮೆಹಬೂಬಾ ಮುಪ್ತಿ, ಇಂಟರ್ನೆಟ್ , ಮೊಬೈಲ್ ಪೋನ್ ಸೇವೆ ಕಡಿತದ ಬಗ್ಗೆ ವರದಿ ಕೇಳಿದ್ದೇನೆ. ಕರ್ಪ್ಯೂ ಜಾರಿ ಮಾಡಲಾಗುತ್ತಿದೆ. ನಾಳೆಗಾಗಿ ನಾವು ಏನನ್ನು ಕಾಯುತ್ತಿದ್ದೇವೆ ಎಂಬುದು ದೇವರಿಗೆ ಗೊತ್ತಿದೆ. ಇದು ಸಂಕಷ್ಟದ ಸಂದರ್ಭವಾಗಿದ್ದು, ಇದರ ವಿರುದ್ಧ ಒಟ್ಟಾಗಿ ಹೋರಾಟ ಮಾಡೋಣ ಎಂದು ಅವರು ಹೇಳಿದ್ದಾರೆ.