ರಾಜ್ಯ ಸರ್ಕಾರದ ಸಂಪೂರ್ಣ ಒಪ್ಪಿಗೆ ಪಡೆದು ಹಿಂದಿನ ಯುಪಿಎ ಸರ್ಕಾರ ಆಂಧ್ರ ಪ್ರದೇಶವನ್ನು ವಿಭಜನೆ ಮಾಡಿತ್ತು. ಹಿಂದೆ ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದಿಂದ ರಕ್ಷಿಸಿದವರು ಪಂಡಿತ್ ಜವಹರಲಾಲ್ ನೆಹರೂ ಅವರು, ಭಾರತದ ಸಂವಿಧಾನದಲ್ಲಿ ವಿಧಿ 370 ಮಾತ್ರ ಇರುವುದಲ್ಲ. 371ಎಯಿಂದ ಐವರೆಗೆ ಇದೆ. ಅವುಗಳಡಿಯಲ್ಲಿ ನಾಗಾಲ್ಯಾಂಡ್, ಅಸ್ಸಾಂ, ಮಣಿಪುರ, ಆಂಧ್ರ ಪ್ರದೇಶ, ಸಿಕ್ಕಿಮ್ ಮೊದಲಾದವುಗಳಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದೆ. ಇಂದು ನೀವು 370ನೇ ವಿಧಿಯನ್ನು ರದ್ದುಪಡಿಸಿದ್ದೀರಿ ಎಂದರೆ ಈ ರಾಜ್ಯಗಳಿಗೆ ಏನು ಸಂದೇಶ ನೀಡುತ್ತೀರಿ ಎಂದು ಮನೀಸ್ ತಿವಾರಿ ಪ್ರಶ್ನಿಸಿದರು.