ಆರ್ಟಿಕಲ್ 370 ರನ್ನು ರದ್ದುಗೊಳಿಸಿರುವ ಮೋದಿ ಸರ್ಕಾರದ ಐತಿಹಾಸಿಕ ನಿರ್ಣಯದ ಬಗ್ಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ನಾನು ಹೇಳಿದ್ದು ಸರಿಯಾಗಿದೆ ಎಂಬುದು ಸಾಬೀತಾಗಿದೆ. ಆರ್ಟಿಕಲ್ 370 ರದ್ದುಗೊಳಿಸುವುದಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿಲ್ಲ ಎಂದು ಹೇಳಿದ್ದೆ. ಅದು ಇಂದು ಸಾಬೀತಾಗಿದೆ. ಆದರೂ ರಾಷ್ಟ್ರಪತಿಗಳು ಅದಾಗಲೇ ಅಂಗೀಕರಿಸಿದ್ದ ನಿರ್ಣಯವನ್ನು ಅಮಿತ್ ಶಾ ಸಂಸತ್ ನಲ್ಲಿ ಘೊಷಿಸಿದ್ದಾರೆ. ಆರ್ಟಿಕಲ್ 370, 35ಎ ಇಂದು ಅಂತ್ಯಗೊಂಡಿದೆ ಎಂದು ಸ್ವಾಮಿ ಟ್ವೀಟ್ ಮಾಡಿದ್ದರು.