ಭಾರತ ಪ್ರಜಾಪ್ರಭುತ್ವ ದೇಶ. ಸಂವಿದಾನದ ಪರಿಚ್ಛೇದ ತಿದ್ದುಪಡಿಗೆ ಸಂಸತ್ ಮಾರ್ಗ ಬಳಸಬಾರದು. 370ನೇ ವಿಧಿ ರದ್ದುಗೊಳಿಸಲು ಕೇಂದ್ರ ಸರ್ಕಾರ ಸಂಸತ್ ಮಾರ್ಗ ಬಳಸಿದ್ದೇಗೆ ಸರಿ?. ರಾಷ್ಟ್ರಪತಿಗಳ ಪರಮಾಧಿಕಾರ ದುರುಪಯೋಗ ಮಾಡಿಕೊಳ್ಳುವ ಮುಖೇನ ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಅಧಿಕಾರ ಕಿತ್ತುಕೊಂಡಿದೆ. ಈ ಆದೇಶ ಕೂಡಲೇ ರದ್ದುಗೊಳಿಸಿ ತೀರ್ಪು ನೀಡಬೇಕೆಂದು ಎಂಎಲ್ ಶರ್ಮಾ ಮನವಿ ಮಾಡಿದ್ದಾರೆ.