ವಿಂಗ್​ ಕಮಾಂಡರ್​ ಅಭಿನಂದನ್​ ವರ್ತಮಾನ್​ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ

ಯೋಧ ಅಭಿನಂದನ್ ವರ್ತಮಾನ್ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 
ಅಭಿನಂದನ್
ಅಭಿನಂದನ್

ನವದೆಹಲಿ: ಬಾಲಾಕೋಟ್ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ ನಂತರದ ಬೆಳವಣಿಗೆಯಲ್ಲಿ ಪಾಕಿಸ್ತಾನ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ ಭಾರತಕ್ಕೆ ವಾಪಸ್ಸಾಗಿದ್ದ ಯೋಧ ಅಭಿನಂದನ್ ವರ್ತಮಾನ್ ಗೆ ಆ.15 ರಂದು ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 

ಫೆ.27 ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಮಿಗ್-21 ನ್ನು ಹೊಡೆದುರುಳಿಸಿ ಅಪಾಯ ಸನ್ನಿವೇಶವನ್ನು ಎದುರಿಸಿ ಪಾರಾಗಿ ಬಂದಿದ್ದರು. ಹಳೆಯ ಮಿಗ್-21 ಯುದ್ಧವಿಮಾನದಿಂದ ಅತ್ಯಾಧುನಿಕ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಸಾಹಸಕ್ಕೆ ತಜ್ಞರು ಬೆರಗಾಗಿದ್ದರು. ಪರಮ ವೀರ ಚಕ್ರ, ಮಹಾ ವೀರ ಚಕ್ರದ ನಂತರ ಯೋಧರ ಸಾಹಸ, ಶೌರ್ಯಗಳನ್ನು ಗುರುತಿಸಿ ನೀಡಲಾಗುವ 3ನೇ ಅತಿ ಶ್ರೇಷ್ಠ ಪ್ರಶಸ್ತಿ ವೀರ ಚಕ್ರವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com